Advertisement

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

12:25 AM Apr 29, 2024 | Team Udayavani |

ಮಂಗಳೂರು/ಉಡುಪಿ: ಚುನಾವಣೆ, ಸತತ ಎರಡು ದಿನ ರಜೆ, ಶುಭ ಸಮಾರಂಭಗಳ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ವಾಹನ ದಟ್ಟಣೆ ಕಂಡು ಬಂತು.

Advertisement

ಸಾಮಾನ್ಯವಾಗಿ ರವಿವಾರ ಬೆಳಗ್ಗೆ, ಮಧ್ಯಾಹ್ನ ವೇಳೆ ಮಂಗಳೂರು, ಉಡುಪಿ ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಇರುತ್ತದೆ. ಆದರೆ ರಜೆ ಹಾಗೂ ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಗರದ ಬೆಳಗ್ಗಿನಿಂದಲೇ ವಾಹನ ದಟ್ಟಣೆ ಕಂಡು ಬಂತು. ಮಧ್ಯಾಹ್ನ ವೇಳೆ ಕೆಲವು ಮದುವೆ ಹಾಲ್‌ಗ‌ಳ ಬಳಿ ಬ್ಲಾಕ್‌ ಉಂಟಾಗಿತ್ತು.

ಮಂಗಳೂರು ಹಾಗೂ ಉಡುಪಿ ನಗರ ವ್ಯಾಪ್ತಿಯ ಪ್ರವಾಸಿ ಕೇಂದ್ರಗಳಲ್ಲಿ ಸಂಜೆ ವೇಳೆ ಜನರು ಹೆಚ್ಚಾಗಿ ಕಂಡು ಬಂದರು. ಮಂಗಳೂರಿನ ತಣ್ಣೀರು ಬಾವಿ, ಪಣಂಬೂರು ಸಹಿತ ವಿವಿಧ ಬೀಚ್‌, ಕದ್ರಿ ಪಾರ್ಕ್‌, ಪಿಲಿಕುಳ ನಿಸರ್ಗಧಾಮ, ಉಡುಪಿಯ ಮಲ್ಪೆ ಬೀಚ್‌, ಶ್ರೀಕೃಷ್ಣ ಮಠ ಮೊದಲಾದೆಡೆಗಳಿಗೆ ಸ್ಥಳೀಯ ಹಾಗೂ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಬಂದಿದ್ದರು. ದೇವಸ್ಥಾನಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಿತ್ತು.

ಹೆದ್ದಾರಿಗಳಲ್ಲೂ ಸಂಚಾರ ಹೆಚ್ಚಳ
ಹೆದ್ದಾರಿಗಳಲ್ಲಿ ವಾಹನ ಸಂಚಾರ ಹೆಚ್ಚಿತ್ತು. ಘನ ವಾಹನಗಳ ಜತೆ ಕಾರು ಮೊದಲಾದವುಗಳ ಸಂಚಾರ ಹೆಚ್ಚಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next