Advertisement

China ದಿಂದ ಭಾರತ ವಿರುದ್ಧ ವಾಟರ್‌ಬಾಂಬ್‌ ಅಸ್ತ್ರ?: ಬ್ರಹ್ಮಪುತ್ರ ನದಿಗೆ ಬೃಹತ್‌ ಡ್ಯಾಂ

01:22 AM Aug 05, 2024 | Team Udayavani |

ಬೀಜಿಂಗ್‌: ಭಾರತ ವಿರುದ್ಧ ಚೀನ ಮತ್ತೂಂದು ಕಂಟಕ ತರಲು ಯೋಜಿಸಿದೆ. ಬ್ರಹ್ಮಪುತ್ರ ನದಿಗೆ ಬೃಹತ್‌ ಅಣೆಕಟ್ಟು (ಸೂಪರ್‌ ಡ್ಯಾಮ್‌) ನಿರ್ಮಾಣ ಮಾಡುವ ಮೂಲಕ ಭಾರತದ ವಿರುದ್ಧ “ವಾಟರ್‌ ಬಾಂಬ್‌’ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

Advertisement

ಬ್ರಹ್ಮಪುತ್ರ ನದಿಯ ತಿರುವಿನಲ್ಲಿ ಅಂದರೆ, ಅರುಣಾಚಲ ಪ್ರದೇಶಕ್ಕೆ ನದಿ ಪ್ರವೇಶಿಸುವ ಮುನ್ನವೇ ಸಿಗುವ ಆಳವಾದ ಜಾಗದಲ್ಲಿ ವಿಶ್ವದಲ್ಲೇ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನ ಹೆಜ್ಜೆ ಇಟ್ಟಿದೆ. ಈ ತಿರುವಿನಲ್ಲಿ 3,000 ಮೀ. ಎತ್ತರದಿಂದ ನದಿ ನೀರು ಕಣಿವೆಗೆ ಧುಮ್ಮಿಕ್ಕುತ್ತದೆ. ಇದು ಭಾರತದ ಗಡಿಯಿಂದ ಕೇವಲ 30 ಕಿ.ಮೀ.ಅಂತರದಲ್ಲಿರಲಿದೆ. ಇದರ ಮೂಲಕ ಚೀನ ಹೆಚ್ಚಿನ ಪ್ರಮಾ ಣದ ನೀರನ್ನು ಬಿಡುಗಡೆ ಮಾಡಿದರೆ ಅದು ಅರುಣಾಚಲ ಪ್ರದೇಶ, ಅಸ್ಸಾಂ ನಲ್ಲಿ ತೀವ್ರ ಪ್ರವಾಹ ಸೃಷ್ಟಿಸಬಲ್ಲದು. ಬ್ರಹ್ಮಪುತ್ರ ಅಣೆಕಟ್ಟು ಭಾರತಕ್ಕೆ “ವಾಟರ್‌ ಬಾಂಬ್‌’ ಆಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಿದೆ ಎಂದು ಆಸ್ಟ್ರೇಲಿಯನ್‌ ಕಾರ್ಯತಂತ್ರ ನೀತಿ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next