Advertisement

ತುಂಗಾಭದ್ರಾ ನದಿಗೆ ನೀರು: ಕಂಪ್ಲಿ ಸೇತುವೆ ಸಂಚಾರ; ಶ್ರೀಕೃಷ್ಣದೇವರಾಯ ಸಮಾಧಿ ಮುಳುಗಡೆ

11:42 AM Jul 13, 2022 | Team Udayavani |

ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಡ್ಯಾಮ್ ಗೆ ಸುಮಾರು ಒಂದು ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ಹೆಚ್ಚುವರಿ  1300 ನೀರು ಕ್ಯೂಸೆಕ್ಸ್‌ ತುಂಗಭದ್ರಾ ನದಿಗೆ ಬಿಡಲಾಗಿದೆ.

Advertisement

ಇದರ ಪರಿಣಾಮವಾಗಿ ತಾಲ್ಲೂಕಿನ ಆನೆಗುಂದಿಯ ನವವೃಂದಾವನ ಗಡ್ಡಿ ಮತ್ತು ಶ್ರೀಕೃಷ್ಣದೇವರಾಯನ ಸಮಾಧಿ (64 ಕಾಲಿನ ಮಂಟಪ) ಹಾಗೂ ಬಳ್ಳಾರಿ,ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳನ್ನು ಸಂಪರ್ಕಿಸುವ ಕಂಪ್ಲಿ ಗಂಗಾವತಿ  ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿ ಪೊಲೀಸ್ ಕಾವಲು ನಿಯೋಜನೆ ಮಾಡಲಾಗಿದೆ.

ನದಿಗೆ ಹೆಚ್ಚುವರಿ ನೀರು ಬಿಟ್ಟಿರುವುದರಿಂದ ಸಣಾಪುರ, ಆನೆಗೊಂದಿ ,ಸಂಗಾಪುರ, ಚಿಕ್ಕಜಂತಕಲ್,ಡಣಾಪುರ, ಹೆಬ್ಬಾಳ್ ,ಮುಸ್ಟೂರ್, ಶಾಲಿಗನೂರು ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ ಡಂಗುರ ಹಾಕಿಸಿ ನದಿ ಹತ್ತಿರ ಜನರು ಹೋಗದಂತೆ ಮುನ್ನೆಚ್ಚರಿಕೆಯನ್ನು ತಾಲ್ಲೂಕು ಆಡಳಿತ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next