Advertisement

ಅಂಡರ್‌ಪಾಸ್‌ಗಳಲ್ಲಿ ನೀರು: ಪರದಾಡಿದ ಸವಾರರು

12:22 PM May 15, 2018 | |

ಬೆಂಗಳೂರು: ಸೋಮವಾರ ಸುರಿದ ಭಾರಿ ಮಳೆಗೆ ನಗರದ ಪ್ರಮುಖ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಯಿತು. ಇದರೊಂದಿಗೆ ಜೋರಾದ ಗಾಳಿಗೆ 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. 

Advertisement

ಸೋಮವಾರ ಮಧ್ಯಾಹ್ನದಿಂದ ಸುರಿದ ಆಲಿಕಲ್ಲು ಸಹಿತ ಮಳೆಯಿಂದಾಗಿ ಓಕಳೀಪುರ, ಸ್ಯಾಂಕಿ ರಸ್ತೆ, ಕಾವೇರಿ ಚಿತ್ರಮಂದಿರ ಬಳಿ ಅಂಡರ್‌ ಪಾಸ್‌ಗಳು ಹಾಗೂ ಹೆಬ್ಟಾಳ ಮೇಲ್ಸೇತುವೆ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಯಿತು. 

ವಿಜಯನಗರ, ಮಹಾಲಕ್ಷಿ ಬಡಾವಣೆ, ಎ.ನಾರಾಯಣಪುರ, ಆಸ್ಟಿನ್‌ ಟೌನ್‌, ಗಾಂಧಿಪಾರ್ಕ್‌, ಕಾಕ್ಸ್‌ಟೌನ್‌ ಸೇರಿದಂತೆ ಹಲವೆಡೆ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿವೆ. 

ಎಲ್ಲೆಲ್ಲಿ ಎಷ್ಟು ಮಳೆ?: ಅಗ್ರಹಾರ ದಾಸರಹಳ್ಳಿ 20.5 ಮಿ.ಮೀ., ತಾವರೆಕೆರೆ 9.5, ಕೊಡಿಗೇಹಳ್ಳಿ 9, ದಾಸನಪುರ 13, ಕೋಣನಕುಂಟೆ 5.5, ನಾಗರಬಾವಿ 3, ಲಾಲ್‌ಬಾಗ್‌ ಮತ್ತು ಹೆಸರಘಟ್ಟ ತಲಾ 1, ಬಸವನಗುಡಿಯಲ್ಲಿ 0.5 ಮಿ.ಮೀ. ಮಳೆಯಾಗಿದೆ. ಇನ್ನೂ ಮೂರ್‍ನಾಲ್ಕು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next