Advertisement

ಕುಂಚಾವರಂನಲ್ಲಿ ನೀರಿನ ಅರವಟ್ಟಿಗೆ

11:11 AM Apr 01, 2022 | Team Udayavani |

ಚಿಂಚೋಳಿ: ತಾಲೂಕಿನ ಕುಂಚಾವರಂ ಗ್ರಾಮ ಪಂಚಾಯಿತಿ ಕಚೇರಿ ಹತ್ತಿರ ರಿಯಾಜ್‌ ಟೆಂಟ್‌ಹೌಸ್‌ ವತಿಯಿಂದ ಪ್ರಯಾಣಿಕರಿಗಾಗಿ ಪ್ರಾರಂಭಿಸಿದ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟಿಸಲಾಯಿತು.

Advertisement

ಇದೆ ವೇಳೆ ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ, ಕುಡಿಯುವ ನೀರು, ಅನ್ನದಾಸೋಹ ಸಮಾಜ ಸೇವೆಯಾಗಿದೆ. ಎಲ್ಲರೂ ಇಂತಹ ಕಾರ್ಯಕ್ಕೆ ಕೈ ಜೋಡಿಸೋಣ ಎಂದರು.

ಮುಖಂಡ ಮಹ್ಮದ್‌ ರಿಯಾಜ ಮಾತನಾಡಿ, ಕಳೆದ 20ವರ್ಷಗಳಿಂದ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಗ್ರಾಮದ ಉಮಾಪತಿ ಶಿವರಾಮಪುರ, ಸಂಜೀವ ಕೊಂಡಂ, ಪ್ರಭಾಕರ, ಗೋಪಾಲ, ಶಾಜೀರಾವ್‌, ಚಂದ್ರಶೆಟ್ಟಿ ಜಾಧವ, ಶ್ರೀಮಂತ ಕಟ್ಟಿಮನಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next