Advertisement

ಶ್ರಾವಣ ಪೂರ್ತಿ ಜಲ, ಭೂಮಿ, ವಾಯು ಆಘಾತ: ಕೋಡಿಮಠ ಶ್ರೀ

11:30 PM Aug 13, 2019 | Team Udayavani |

ಬಾದಾಮಿ: ಶ್ರಾವಣ ಮಾಸ ಪೂರ್ತಿ ಜಲ, ಭೂಮಿ, ವಾಯು ಪ್ರಕಾರದ ಆಘಾತಗಳು ಸಂಭವಿಸಲಿದ್ದು, ಸದ್ಯ ಜಲಾಘಾತವಾಗುತ್ತಿದೆ. ಶ್ರಾವಣ ಮುಗಿಯುವವರೆಗೂ ಇದು ಮುಂದುವರಿಯುವ ಲಕ್ಷಣಗಳಿವೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Advertisement

ಸುಕ್ಷೇತ್ರ ಶಿವಯೋಗಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ತಿಕ ಮಾಸದಲ್ಲೂ ಆಗಾಗ ಜಲಾಘಾತವಾಗಲಿದೆ. ಮುಂಬರುವ ದಿನಗಳಲ್ಲಿ ಭೂಮಿ ಆಘಾತ ಸಂಭವಿಸಲಿದೆ. ದೊಡ್ಡ, ದೊಡ್ಡ ನಗರಗಳಲ್ಲಿ ಕಟ್ಟಡಗಳು ಅಪಾಯಕ್ಕೆ ಸಿಲುಕಲಿವೆ. ವಾಯು ಆಘಾತ ಸಂಭವವೂ ಇದೆ. ಶಿವಯೋಗಮಂದಿರದಲ್ಲಿ ಕಳೆದ 6 ದಿನಗಳ ಹಿಂದೆ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಸುಮಾರು 100 ಕೋಟಿಗೂ ಹೆಚ್ಚು ನಷ್ಟವಾಗಿದೆ. ಸರ್ಕಾರ ನೆರವು ನೀಡಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next