Advertisement

ಅದ್ದೂರಿ ಮದುವೆಯಾಗಿ ಹಣ ದುಂದುವೆಚ್ಚ ಮಾಡದಿರಿ…ನವಜೋಡಿಗಳಿಗೆ ಪ್ರಧಾನಿ ಕಿವಿಮಾತು

09:14 AM Nov 07, 2022 | Team Udayavani |

ಗುಜರಾತ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ನ ಭಾವನಗರದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಸಮಾಜಕ್ಕಾಗಿ ಕೊಡುಗೆ ನೀಡುವಂತೆ ದಂಪತಿಗಳಿಗೆ ಕರೆ ನೀಡಿದರು.

Advertisement

ಇಲ್ಲಿನ ಜವಾಹರ್ ಮೈದಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ವೇಳೆ ತಂದೆಯನ್ನು ಕಳೆದುಕೊಂಡ 551 ಯುವತಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮದ ಕ್ಷಣಕ್ಕೆ ಪ್ರಧಾನಿ ಮೋದಿ ಸಾಕ್ಷಿಯಾದರು.

ನವಜೋಡಿಗಳಿಗೆ ಶುಭ ಹಾರೈಸಿದ ಪ್ರಧಾನಿ ಸಾಮೂಹಿಕ ವಿವಾಹ ಈ ಸಂದರ್ಭದಲ್ಲಿ, ಮನೆಗೆ ಬಂದ ನಂತರ ಸಂಬಂಧಿಕರ ಒತ್ತಡದಲ್ಲಿ ಪ್ರತ್ಯೇಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿ ದುಂದುವೆಚ್ಚ ಮಾಡಬೇಡಿ ಬದಲಾಗಿ ಆ ಹಣವನ್ನು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಸಂಗ್ರಹಿಸಿಡಿ ಎಂದು ಸಲಹೆ ನೀಡಿದ್ದಾರೆ.

“ಗುಜರಾತ್ ಜನತೆ ಕ್ರಮೇಣ ಸಾಮೂಹಿಕ ವಿವಾಹದ ಈ ಪದ್ಧತಿಯನ್ನು ಇಷ್ಟಪಡುತ್ತಿದ್ದಾರೆ. ಮೊದಲು, ಜನರು ಕೇವಲ ಪ್ರದರ್ಶನಕ್ಕಾಗಿ ಅದ್ಧೂರಿ ಸಮಾರಂಭವನ್ನು ಆಯೋಜಿಸಲು ಹಣವನ್ನು ಸಾಲವಾಗಿ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ, ಜನರು ಜಾಗೃತರಾಗಿದ್ದಾರೆ. ಅವರು ಈಗ ಸಾಮೂಹಿಕ ವಿವಾಹ ಕಾರ್ಯಕ್ರಮಗಳತ್ತ ಮುಖ ಮಾಡಿದ್ದಾರೆ,” ಎಂದು ಪ್ರಧಾನಿ ಮೋದಿ ಹೇಳಿದರು.

 

Advertisement

Advertisement

Udayavani is now on Telegram. Click here to join our channel and stay updated with the latest news.

Next