Advertisement

ಕಾರವಾರದಲ್ಲಿ ಯುದ್ಧ ವಿಮಾನ ಮ್ಯೂಜಿಯಂ: ಸಚಿವೆ ನಿರ್ಮಲಾ

06:25 AM Feb 25, 2018 | Team Udayavani |

ಕಾರವಾರ: ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಲು ಅನುಕೂಲವಾಗುವಂತೆ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಕಾರವಾರದಲ್ಲಿ ಪ್ರಾರಂಭಿಸಲು ಕೌಶಲ್ಯ ಸಚಿವಾಲಯ ಬಯಸಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸೀಬಡ್‌ ನಿರಾಶ್ರಿತರಿಗೆ ಪರಿಹಾರ ವಿತರಿಸಿ ಮಾತನಾಡಿದ ಅವರು, ಈ ಸಂಬಂಧ ಜಿಲ್ಲಾಡಳಿತ ಸ್ಥಳ ಸೇರಿ ಅಗತ್ಯ ಅನುಕೂಲಗಳ ಬಗ್ಗೆ ಮಾಹಿತಿ ಕಳಿಸಬೇಕು ಎಂದರು. ಕಾರವಾರದಲ್ಲಿ ಯುದ್ಧ ವಿಮಾನ ಮ್ಯೂಜಿಯಂ ಸ್ಥಾಪಿಸಲಾಗುವುದು. ಜಿಲ್ಲಾಡಳಿತ ಸ್ಥಳ ನೀಡಬೇಕು. 

ಕಾರ್ಯಾಚರಣೆ ನಿಲ್ಲಿಸಿ, ನಿವೃತ್ತಿಯಾಗಿರುವ ಯುದ್ಧ ವಿಮಾನವನ್ನು ಕಾರವಾರಕ್ಕೆ ತರುವ ಖರ್ಚು ವೆಚ್ಚವನ್ನು ಜಿಲ್ಲಾಡಳಿತ ಇಲ್ಲವೇ ರಾಜ್ಯ ಸರ್ಕಾರ ಭರಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next