Advertisement

ಭಗತ್‌ ಸೇನೆಯಿಂದ ನೇತ್ರದಾನ ಬೃಹತ್‌ ಅಭಿಯಾನ, ಸಮ್ಮಾನ

07:10 AM Aug 18, 2017 | Team Udayavani |

ಮೂಡಬಿದಿರೆ: “ಸಮಾಜದಲ್ಲಿ ಕ್ರಾಂತಿಕಾರಿಯಾಗಬೇಕಾಗಿಲ್ಲ. ಸಮಾಜ ಮುಖೀ ಚಿಂತನೆಗಳ ಮೂಲಕ ಹಲವು ವಿಧದ ಸೇವೆಯನ್ನು ಮಾಡುತ್ತ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದು’ ಎಂದು ಆಳ್ವಾಸ್‌ ನರ್ಸಿಂಗ್‌ ಕಾಲೇಜಿನ ಉಪನ್ಯಾಸಕ, ಜೇಸಿಐ ರಾಷ್ಟ್ರೀಯ ತರಬೇತುದಾರ ಧೀರೇಂದ್ರ ಜೈನ್‌ ಹೇಳಿದರು.

Advertisement

ಇಲ್ಲಿನ ಭಗತ್‌ ಸೇನೆ ವತಿಯಿಂದ ಸ್ವಾತಂತ್ರೊತ್ಸವ ಪ್ರಯುಕ್ತ  ಬಸ್‌ ನಿಲ್ದಾಣದಲ್ಲಿ ಮಂಗಳವಾರ ನಡೆದ ನೇತ್ರದಾನ ಬೃಹತ್‌ ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯುವಜನರು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಮುಳುಗುವ ಬದಲು ಸಮಾಜಮುಖೀಯಾಗಿ ತೊಡಗಿಸಿ ಕೊಳ್ಳುವುದು ಅಪೇಕ್ಷಣೀಯ’ ಎಂದರು.

ನಿವೃತ್ತ ಯೋಧ ರಮಾನಂದ ರಾವ್‌ ಅವರನ್ನು ಸಮ್ಮಾನಿಸಲಾಯಿತು.

ಮೂಡಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಡಾ| ಜ್ಞಾನೇಶ್‌ ಕಾಮತ್‌ ನೇತ್ರದಾನದ ಮಹತ್ವ, ನೇತ್ರದಾನ ಮಾಡುವ ವಿಧಾನದ ಕುರಿತು ಮಾತನಾ ಡಿದರು. ವಕೀಲ ಶರತ್‌ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಭಗತ್‌ ಸೇನೆಯ ಅಧ್ಯಕ್ಷ ಸುಜಿತ್‌ ಶೆಟ್ಟಿ, ಪ್ರಮುಖರಾದ ಪ್ರಸಾದ್‌ ಆಳ್ವ, ಪ್ರಜ್ವಲ್‌ ಕುಲಾಲ್‌, ಅಖೀಲ್‌ ಸಾಲ್ಯಾನ್‌, ಅಶೋಕ್‌ ಶೆಟ್ಟಿ, ಆಶಿಕ್‌ ಶೆಟ್ಟಿ, ಸಂದೀಪ್‌ ಶೆಟ್ಟಿ, ಅಭಿಷೇಕ್‌ ದೇವಾಡಿಗ, ಚೇತನ್‌ ನಾಯಕ್‌, ಸಂದೀಪ್‌ ಸಹಿತ ಸದಸ್ಯರು ಉಪಸ್ಥಿತರಿದ್ದರು. ವಸುಧಾ ನಿರೂಪಿಸಿದರು. ಸದಸ್ಯ ನಾಗರಾಜ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next