Advertisement

ವಾಡಿ: 750 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ್‌

06:29 PM Jun 27, 2020 | Naveen |

ವಾಡಿ: ನಗರದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಿದ್ದ ಒಟ್ಟು 767 ವಿದ್ಯಾರ್ಥಿಗಳಲ್ಲಿ 750 ಮಕ್ಕಳು ಪ್ರಥಮ ಭಾಷೆ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದರೆ, 17 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

Advertisement

ಕೋವಿಡ್ ಸೋಂಕಿತರ ಕುಟುಂಬದಿಂದ ಆಗಮಿಸಿದ್ದ ಇಬ್ಬರು ಮಕ್ಕಳಿಗೆ ವಿಶೇಷ ಕೊಠಡಿ ಒದಗಿಸಲಾಗಿತ್ತು. ರಾವೂರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 215 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಗೈರು ಹಾಜರಿದ್ದರು. ನಾಲವಾರ ಸರಕಾರಿ ಪ್ರೌಢಶಾಲೆಯಲ್ಲಿ ಸುಸೂತ್ರವಾಗಿ ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರದ ದ್ವಾರದಲ್ಲಿ ಪುರಸಭೆ ಸದಸ್ಯ ಕಾಂಗ್ರೆಸ್‌ನ ಪೃಥ್ವಿರಾಜ ಸೂರ್ಯವಂಶಿ ವ್ಯವಸ್ಥೆ ಮಾಡಿದ್ದ ಸ್ಯಾನಿಟೈಸರ್‌ ಸ್ಪ್ರೇ ಗಮನ ಸೆಳೆಯಿತು. ವಾಡಿ ಪರೀಕ್ಷೆ ಕೇಂದ್ರಗಳಿಗೆ ಮಹೇಶಕುಮಾರ ಬಡಿಗೇರ, ಚಂದ್ರಾಮ ಅಮನಘಡ ಮೇಲ್ವಿಚಾರಕರಾಗಿದ್ದರೆ, ಪ್ರಿಯದರ್ಶಿನಿ ರಾವೂರಿನ ಪರೀಕ್ಷಾ ಕೇಂದ್ರಕ್ಕೆ ಚೀಫ್‌ ಆಗಿದ್ದರು. ದತ್ತಪ್ಪ ಡೋಂಬಳೆ ನೋಡಲ್‌ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next