Advertisement

ರಾಮಮಂದಿರಕ್ಕಾಗಿ ಶಪಥ’

11:07 AM Nov 30, 2018 | Team Udayavani |

ಲಕ್ನೋ: ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ಅಯೋಧ್ಯೆಯಲ್ಲಿ ಇತ್ತೀಚೆಗೆ ಧರ್ಮ ಸಭೆ ನಡೆಸಿದ್ದ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ), ಸದ್ಯದಲ್ಲೇ ದೇಶದ ಜನತೆಗೆ ರಾಮ ಮಂದಿರ ನಿರ್ಮಾಣಕ್ಕೆ ಬದ್ಧರಾಗಿರುವ ಬಗ್ಗೆ ಶಪಥ ಮಾಡಿಸುವ ಅಭಿಯಾನ ಆರಂಭಿಸಲು ನಿರ್ಧರಿಸಿದೆ. ಏಳು ದಿನಗಳ ಈ ಅಭಿಯಾನ ಡಿ.18ರ “ಗೀತಾ ಜಯಂತಿ’ಯಿಂದ ಆರಂಭಗೊಳ್ಳಲಿದೆ. ಜತೆಗೆ, ಜಿಲ್ಲಾ ಮಟ್ಟದಲ್ಲಿ ಡಿ. 18ರಂದು  ಧರ್ಮ ಸಮ್ಮೇಳನಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಇದೇ ರೀತಿಯ ಅಭಿಯಾನವನ್ನು ಹೊಸದಿಲ್ಲಿಯಲ್ಲಿ ಡಿ. 5ರಂದು ನಡೆಸಲು ತೀರ್ಮಾನಿಸಲಾಗಿದ್ದು ಅದರಲ್ಲಿ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next