Advertisement

ಮತದಾನ ಮಾಡಿದ ಮಂಗಳಮುಖೀಯರು

11:39 AM May 13, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿ ಮಂಗಳ ಮುಖೀಯರು ಸಂತಸ ಪಟ್ಟರು. ಸಿ.ವಿ. ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಸೇಂಟ್‌ ಅಲೋಸಿಯಸ್‌ ಸ್ಕೂಲ್‌ನಲ್ಲಿ  ಮೂವತ್ತೈದು ಮಂಗಳ ಮುಖೀಯರು ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದರು.

Advertisement

ಸರ್ಕಾರ ತಮಗೆ ಮತದಾನದ ಹಕ್ಕು ನೀಡಿದ್ದು, ಆದರೆ, ತಮಗೆ ಅಗತ್ಯ ಸೌಲಭ್ಯ ನೀಡಿಲ್ಲ. ನಮ್ಮನ್ನು ಕೀಳು ಭಾವನೆಯಿಂದ ನೋಡುತ್ತಾರೆ. ನಮಗೂ ಗೌರವ ಕೊಡಬೇಕು. ಸರ್ಕಾರಗಳು ಉದ್ಯೋಗ ನೀಡಬೇಕು ಎಂದು ಮೊದಲ ಬಾರಿ ಮತದಾನ ಮಾಡಿದ ಮಂಗಳ ಮುಖೀ ಲಾವಣ್ಯ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next