Advertisement

ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ

10:56 PM Aug 31, 2019 | Lakshmi GovindaRaj |

ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು 2020ರ ವಿಶೇಷ ಮತದಾನ ನೋಂದಣಿ ಹಾಗೂ ಪರಿಷ್ಕರಣೆ ಕಾರ್ಯವನ್ನು ಸೆ.1ರಿಂದ 2020ರ ಜ.1ರವರೆಗೆ ನಡೆಸಲಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್‌ ಕುಮಾರ್‌, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ವರ್ಷವೂ ನಡೆಯುತ್ತದೆ. ಅದ ರಂತೆ 2020ನೇ ಸಾಲಿನ ಪಟ್ಟಿ ನೋಂದಣಿ ಹಾಗೂ ಪರಿಷ್ಕಣೆ ಕಾರ್ಯವನ್ನು ಸೆ.1ರಿಂದ ಆರಂಭಿಸಲಿದ್ದೇವೆ ಎಂದು ಹೇಳಿದರು.

Advertisement

2020 ಜ.1ಕ್ಕೆ 18 ವರ್ಷ ತುಂಬುವ ಯುವಕ, ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಜತೆಗೆ 18 ವರ್ಷ ತುಂಬಿದ್ದರೂ, ಇನ್ನೂ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಿಕೊಳ್ಳದವರು ಕೂಡ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ, ವಿಳಾಸ ಬದಲಾಗಿದ್ದರೆ ಸರಿಪಡಿಸಿಕೊಳ್ಳಲು ಅವಕಾಶ ಇದೆ. ಸೆ.1ರಿಂದ 2020ರ ಜನವರಿ 1ರ ವರೆಗೆ ಅವಕಾಶ ಇದೆ. ಜ.8ರ ವರೆಗೆ ಸಮಗ್ರ ವರದಿ ಬಿಡುಗಡೆ ಮಾಡಲಿದ್ದೇವೆ. ಮತದಾರರ ಪಟ್ಟಿ ಯಲ್ಲಿ ತಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬು ದನ್ನು ಓಟರ್‌ ಹೆಲ್ಪ್ಲೈನ್‌ ಮೊಬೈಲ್‌ ಆ್ಯಪ್‌, ಚುನಾವಣಾ ಆಯೋಗದ 6151 ಸರ್ವಿಸ್‌ ಸೆಂಟರ್‌ ಹಾಗೂ 1950 ಕಾಲ್‌ ಸೆಂಟರ್‌ಗೆ ಕರೆ ಮಾಡಿ ಮಾಹಿತಿ ಪಡೆಯ ಬಹುದಾಗಿದೆ ಎಂದು ಹೇಳಿದರು.

ಜ.8ರಂದು ಅಂತಿಮ ಪಟ್ಟಿ ಬಿಡುಗಡೆ: ಸೆ.1ರಿಂದ ಸೆ.30ರ ತನಕ ಆಯೋಗದ ಮತಗಟ್ಟೆ ಅಧಿಕಾರಿಗಳು(ಬಿಎಲ್‌ಓ) ಮನೆ, ಮನೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹೊಸ ಮತದಾರರ ಸೇರ್ಪಡೆ ಮತ್ತು ಡಿಲೀಡ್‌ ಮಾಡಬೇಕಿರುವ ಮತದಾರರ ಮಾಹಿತಿಯನ್ನು ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬಿಎಲ್‌ಒಗಳು ಮತದಾರರಿಗೆ ಸಂಬಂಧಿ ಸಿದ ಎಲ್ಲ ಮಾಹಿತಿಯನ್ನು ಸಂಗ್ರಹ ಮಾಡಲಿದ್ದಾರೆ.

ಸೆ.16ರಿಂದ ಅ.15ರ ತನಕ ವಿಳಾಸ ಮಾಹಿತಿ ಖಚಿತಪಡಿಸಿಕೊಳ್ಳುವುದು, ಪರ್ಯಾಯ ಮತಗಟ್ಟೆ ಇತ್ಯಾದಿ ಎಲ್ಲ ಮಾಹಿತಿಯನ್ನು ಪಡೆ ಯಲಿದ್ದಾರೆ. ಅ.15ಕ್ಕೆ ಮತದಾರರ ಪಟ್ಟಿಯಲ್ಲಿ ಕರಡು ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನ.30ರವರೆಗೆ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ನ.2, 3 ಹಾಗೂ 9 ಮತ್ತು 10ರಂದು ವಿಶೇಷ ಅಭಿಯಾನ ನಡೆಸಲಿದ್ದೇವೆ. ಆಕ್ಷೇ ಪಣೆಗಳ ಪರಿಶೀಲನೆ ಸಹಿತವಾಗಿ ಎಲ್ಲ ಕಾರ್ಯ ಮುಗಿಸಿ ಜ.8 ರಂದು ಅಂತಿಮ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದರು.

Advertisement

ಯುವ ಮತದಾರರ ಸಂಖ್ಯೆ: ರಾಜ್ಯದಲ್ಲಿ 10,19,550 ಯುವ ಮತದಾರರಿದ್ದು, ಈ ಅಭಿಯಾನದಲ್ಲಿ ಇನ್ನಷ್ಟು ಯುವ ಮತ ದಾರರು ಸೇರಿಕೊಳ್ಳುವ ಸಾಧ್ಯತೆ ಇದೆ. ಬೆಳಗಾವಿಯಲ್ಲಿ 82, 230, ಮೈಸೂರಿನಲ್ಲಿ 45,857, ರಾಯ ಚೂರಿನಲ್ಲಿ 36,185, ಬೆಂಗಳೂರು ನಗರದಲ್ಲಿ 42,584, ಉಡುಪಿಯಲ್ಲಿ 22,320, ದಕ್ಷಿಣ ಕನ್ನಡದಲ್ಲಿ 37,375 ಸೇರಿ ರಾಜ್ಯದಲ್ಲಿ ಒಟ್ಟು 10,19, 550 ಯುವ ಮತದಾರಿದ್ದಾರೆ. ಯುವ ಮತದಾರರು ಸೇರಿ ಒಟ್ಟಾರೆ ಯಾಗಿ ರಾಜ್ಯದಲ್ಲಿ 5,10,60,498 ಮತದಾರ ರಿದ್ದು, ಇದರಲ್ಲಿ 2,58,01,694 ಪುರುಷರು, 2,52,54,153 ಮಹಿಳೆ ಯರು, 465 ಇತರ ಮತದಾರರಿದ್ದಾರೆ ಎಂದು ವಿವರ ನೀಡಿದರು.

ಕೈಜೋಡಿಸಬೇಕು: ಮತದಾರರ ಪಟ್ಟಿ ನೋಂದಣಿ ಹಾಗೂ ಪರಿಷ್ಕರಣೆ ಕಾರ್ಯ ಈಗ ಆರಂಭವಾಗಿರುವುದರಿಂದ ರಾಜಕೀಯ ಪಕ್ಷದ ಏಜೆಂಟರು ನಮ್ಮ ಜತೆ ಸೇರಿಕೊಂಡರೆ, ಡಿಲೀಟ್‌ ಆಗಿರುವ ಅಥವಾ ಹೊಸದಾಗಿ ಸೇರಿಸಬೇಕಿರುವ ಮತದಾರರ ಮಾಹಿತಿ ಸುಲಭವಾಗಿ ಸಿಗಲಿದೆ ಎಂದರು.

ಡಿಲೀಟ್‌ ಮಾಡೋದು ಸುಲಭವಲ್ಲ: ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ಸ್ವಲ್ಪ ಕಠಿಣಗೊಳಿಸಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೊದಲು ನೋಟಿಫಿಕೇಷನ್‌ ಹೊರಡಿಸಲಾಗುತ್ತದೆ. ಇದಾದ ನಂತರ ಅವರ ಮನೆ ಬಾಗಿಲಿಗೆ ನೋಟಿಸ್‌ ಕೂಡ ಅಂಟಿಸಲಾಗುತ್ತದೆ. ನೋಟಿಸ್‌ ಅಂಟಿಸಿದ್ದನ್ನು ಅವರು ಗಮನಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕೇ ಅಥವಾ ಡಿಲೀಟ್‌ ಮಾಡುವ ಕ್ರಮ ಸರಿ ಇದೆಯೇ ಎಂಬುದನ್ನು ಖಚಿತಪಡಿಸಿದ ನಂತರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲಿದ್ದೇವೆ ಎಂದು ಸಂಜೀವ್‌ ಕುಮಾರ್‌ ಮಾಹಿತಿ ನೀಡಿದರು.

ಉಪಚುನಾವಣೆ ಯಾವಾಗ ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ನಾವು ಉಪಚುನಾವಣೆ ನಡೆಸಲು ಸಿದ್ಧರಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಅಲ್ಲಿನ ತೀರ್ಪು ನೋಡಿಕೊಂಡು ಕೇಂದ್ರ ಚುನಾವಣಾ ಆಯೋಗ ಮುನ್ನಡೆಯಬಹುದು.
-ಸಂಜೀವ್‌ ಕುಮಾರ್‌, ಮುಖ್ಯಚುನಾವಣಾ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next