Advertisement

ಬಾಟಲ್‌ ಮೂಲಕ ಮತ ಜಾಗೃತಿ

12:36 AM Apr 13, 2019 | Lakshmi GovindaRaju |

ಬೆಂಗಳೂರು: ಬಾಟಲ್‌ ಕಲಾಕೃತಿ ಮೂಲಕ ಚನ್ನಟ್ಟಣದ ಕಲಾವಿದ ಬಸವರಾಜು ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಪ್ರಸ್‌ಕ್ಲಬ್‌ನಲ್ಲಿ ಶುಕ್ರವಾರ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲ್ಯಾಬೊರೇಟಿಕ್‌ ಬಾಟಲ್‌ಗ‌ಳಲ್ಲಿ ದೇಶದ ಪ್ರಮುಖ ನಾಯಕರು ಮತ್ತು ವಿವಿಧ ಪಕ್ಷಗಳ ಚಿಹ್ನೆಗಳೊಂದಿಗೆ ಮತದಾನ ಸಂದೇಶ ಸಾರಲಾಗುತ್ತಿದೆ ಎಂದು ತಿಳಿಸಿದರು.

ಒಂದು ಬಾಟಲ್‌ನೊಳಗೆ ಇವಿಎಂ ಮಿಷನ್‌, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಎಐಎಡಿಎಂಕೆ, ಡಿಟಿಪಿ ಪಕ್ಷದ ಚಿಹ್ನೆಗಳೊಂದಿಗೆ ನಿಮ್ಮ ಮತವನ್ನು ವ್ಯರ್ಥಗೊಳಿಸಬೇಡಿ, ನಿಮ್ಮ ಹಕ್ಕುಗಳನ್ನು ಕಡ್ಡಾಯವಾಗಿ ಚಲಾಯಿಸಿ ಎಂಬ ಸಂದೇಶ ಸಾರಿದ್ದಾರೆ.

ಇನ್ನೊಂದು ಬಾಟಲ್‌ನಲ್ಲಿ ಎಎಪಿ, ಪಿಡಿಪಿ, ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌, ಶಿವಸೇನೆ ಪಕ್ಷಗಳ ಚಿಹ್ನೆಗಳೊಂದಿಗೆ “ಹ್ಯಾವ್‌ ಎ ವಿಷನ್‌? ಮೇಕ್‌ ಎ ರೈಟ್‌ ಡಿಸಿಷನ್‌’ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next