Advertisement

Vitla; ಅಡಿಪಾಯ ನೆಲಸಮ ಮಾಡಿ ರಸ್ತೆ ನಿರ್ಮಾಣ : ದೂರು

09:01 PM Jan 30, 2024 | Team Udayavani |

ವಿಟ್ಲ: ಅನಂತಾಡಿ ಗ್ರಾಮ ಬಾಬನಕಟ್ಟೆ ಸಮೀಪದ ಕೊಂಗಲಾಯಿಯಲ್ಲಿ ವ್ಯಕ್ತಿಯೋರ್ವರು ಹೊಸ ಮನೆ ನಿರ್ಮಾಣಕ್ಕೆ ಹಾಕಿರುವ ಅಡಿಪಾಯವನ್ನು ನೆಲಸಮ ಮಾಡಿ, ಅದರ ಮೇಲೆ ರಸ್ತೆ ನಿರ್ಮಿಸಿದ ಘಟನೆಯ ವಿರುದ್ಧ ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಕೊಂಗಲಾಯಿಯಲ್ಲಿ ತಿರುಮಲೇಶ್ವರ ಅವರು ಹೊಸ ಮನೆ ನಿರ್ಮಾಣಕ್ಕೆ ಮಾಡಿರುವ ಅಡಿಪಾಯವನ್ನು ಆರೋಪಿಗಳಾದ ಸೋಮಶೇಖರ ಹಾಗೂ ರಾಧಾಕೃಷ್ಣ ಅವರು ನೆಲಸಮ ಮಾಡಿ ರಸ್ತೆ ನಿರ್ಮಿಸಿದ್ದರು. ಈ ಬಗ್ಗೆ ಅವರು ಆರೋಪಿಗಳಲ್ಲಿ ವಿಚಾರಿಸಿದಾಗ ಜಗಳವಾಗಿದ್ದು, ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿ ಮನೆಗೆ ಹಿಂದಿರುಗಿದಾಗ ಅವಾಚ್ಯವಾಗಿ ಬೈಯ್ದು , ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next