Advertisement

ತಿರುಮಲಕ್ಕೆ ಶ್ರೀಲಂಕಾ ಮಾಜಿ ಅಧ್ಯಕ್ಷ ಭೇಟಿ

12:08 PM Mar 01, 2018 | Team Udayavani |

ದೇವನಹಳ್ಳಿ: ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಆದರೆ ಶ್ರೀಲಂಕಾದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವಂತೆ ಹಾರೈಸುತ್ತೇನೆ ಎಂದು ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ತಿಳಿಸಿದರು.

Advertisement

ತಾಲೂಕಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತಾಜ್‌ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಲಂಕಾದಲ್ಲಿ ಯುದ್ಧದ ನಂತರ ಆಗೀನ ಭಾರತ ಸರ್ಕಾರ ಶ್ರೀಲಂಕಾದೊಂದಿಗೆ ಯಾಕೋ ಒಲವನ್ನು ತೋರಲಿಲ್ಲ, ಅನಿವಾರ್ಯವಾಗಿ ಚೀನಾದೊಂದಿಗೆ ಒಪ್ಪಂದ ಮಾಡಿ ಕೊಂಡಿತು. 

ಲಂಕಾದಲ್ಲಿ ಪ್ರಸ್ತುತ ಸರ್ಕಾರ ಪ್ರಮುಖ ವಾಣಿಜ್ಯ ಬಂದರನ್ನು ಚೀನಾ ಸರ್ಕಾರಕ್ಕೆ ಮಾರಾಟ ಮಾಡಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು. ನಾನು ತಿರುಮಲ ವೆಂಕಟರಮಣಸ್ವಾಮಿ ಭಕ್ತನಾಗಿದ್ದೇನೆ. ಇಂದು ಬೆಳಗ್ಗೆ ದೇವರ ದರ್ಶನವನ್ನು ಪಡೆದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದೇನೆ. ಹಲವಾರು ಬಾರಿ ಭಾರತಕ್ಕೆ ಬೇಟಿ ಕೊಟ್ಟಿದ್ದೇನೆ ಎಂದರು.

ಸಂಸದ ಲೋಹನ್‌, ಮಾಜಿ ಸಂಸದ ಹಾಗೂ ಆಪ್ತ ಕಾರ್ಯದರ್ಶಿ ಲೋಪ್‌ ಬಂಡಾರ, ಐಎಂಜೆ ಯು ರಾಷ್ಟಾಧ್ಯಕ್ಷ ಬಾಲಬಾಸ್ಕರ್‌ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next