Advertisement

ಜ್ಯೋತಿಷಿ ದ್ವಾರಕನಾಥ್‌ ಮನೆಗೆ ಸಿಎಂ ಭೇಟಿ

06:46 AM Mar 13, 2019 | |

ಬೆಂಗಳೂರು: ಖ್ಯಾತ ಜ್ಯೋತಿಷಿ ದ್ವಾರಕಾನಾಥ್‌ ಮನೆಗೆ ಮಂಗಳವಾರ ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪುತ್ರ ನಿಖೀಲ್‌ ಕುಮಾರಸ್ವಾಮಿ ಭೇಟಿ ನೀಡಿ ಲೋಕಾ ಚುನಾವಣೆ ಕುರಿತು ಚರ್ಚೆ ನಡೆಸಿದ್ದು, ಅವರನ್ನು ಜ್ಯೋತಿಷಿ ದ್ವಾರಕಾನಾಥ್‌ ಮಂಗಳವಾದ್ಯಗಳೊಂದಿಗೆ ಬೀಳ್ಕೊಟ್ಟರು.

Advertisement

ಬಳಿಕ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಎಂದಿನಂತೆ ನಮ್ಮ ಮನೆಗೆ ಬಂದಿದ್ದಾರೆ ಇದೇನು ಹೊಸದಲ್ಲ. ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು 2017 ರಲ್ಲೇ ಹೇಳಿದ್ದೆ. ಅವರು ನಂತರ ಬಂದು ಭೇಟಿ ಮಾಡುವುದಾಗಿ ಹೇಳಿದ್ದರು. ಜತೆಗೆ ನಿಖೀಲ್‌ ಕೂಡ ಬರುವುದಾಗಿ ಹೇಳಿದ್ದರು. ಬನ್ನಿ ಎಂದು ತಿಳಿಸಿದ್ದೆ. ನನಗೆ ಎಲ್ಲ ರಾಜಕಾರಣಿಗಳೂ ಒಂದೆ ಎಂದರು.

ಕುಮಾರಸ್ವಾಮಿ ಹಿಂದಿನವಾರವೇ ಬರಬೇಕಿತ್ತು. ಕಾರಣಾಂತರದಿಂದ ಬಂದಿರಲಿಲ್ಲ. ನಮ್ಮ  ಮನೆಯಲ್ಲಿ ಏನೂ ಪೂಜೆ ಮಾಡಿಲ್ಲ, ದತ್ತ ದೇವರ ಸ್ಮರಣೆ, ಸುಬ್ರಹ್ಮಣ್ಯ ಸ್ವಾಮಿ ಜಪವೇ ನಮ್ಮ ಪೂಜೆ ಎಂದು ತಿಳಿಸಿದರು.

ಮತ್ತೆ ಮೋದಿ ಪ್ರಧಾನಿ: ಈಗ ನಮ್ಮ ದೇಶದಲ್ಲಿ ಮೋದಿ ಅವರನ್ನು ಸವಾಲಾಗಿ ಸ್ವೀಕರಿಸುವವರೂ ಯಾಯು ಇಲ್ಲ ಹೀಗಾಗಿ ಅವರು ಮತ್ತೆ  ಪ್ರಧಾನಿಯಾಗಿ ಮತ್ತೆ ಹೊರ ಹೊಮ್ಮುತ್ತಾರೆ. ಸರ್ಕಾರ ರಚನೆ ಮಾಡುತ್ತಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಇನ್ನೂ ಸಮಯ ಬೇಕು ಎಂದು ದ್ವಾರಕಾನಾಥ ರಾಷ್ಟ್ರರಾಜಕಾರಣದ ಬಗ್ಗೆ  ಭವಿಷ್ಯ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next