Advertisement

ಸೋದೆ ಶ್ರೀವಾದಿರಾಜ ಮಠಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ

07:11 PM Aug 21, 2021 | Team Udayavani |

ಶಿರಸಿ: ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋದೆ ಶ್ರೀವಾದಿರಾಜ ಮಠಕ್ಕೆ ಭೇಟಿ ನೀಡಿ ರಮಾ ತ್ರಿವಿಕ್ರಮ ದೇವರ, ಶ್ರೀವಾದಿರಾಜಗುರುರಾಜರ ಹಾಗೂ ಶ್ರೀಭೂತರಾಜರ ದರ್ಶನ ಪಡೆದರು.

Advertisement

ಕ್ಷೇತ್ರದಲ್ಲಿ ಚಾತುರ್ಮಾಸ್ಯ ವ್ರತ ನಿರತರಾದ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥರನ್ನು, ಭೀಮನಕಟ್ಟೆ ಮಠಾಧೀಶ ಶ್ರೀರಘುವರೇಂದ್ರ ತೀರ್ಥರನ್ನು ಹಾಗೂ ಶೀರೂರು ಮಠಾಧೀಶ ಶ್ರೀವೇದವರ್ಧನ ತೀರ್ಥರನ್ನು ಭೇಟಿಮಾಡಿ ಫಲಮಂತ್ರಾಕ್ಷತೆ ಪಡೆದರು.

ಈ ಸಂದರ್ಭದಲ್ಲಿ ಕಾಗೇರಿಯವರ ಪತ್ನಿ ಭಾರತಿ, ಸೋಂದಾ ಗ್ರಾಮ ಪಂಚಾಯತಿ ಅಧ್ಯಕ್ಷೆ  ಮಮತಾ, ಉಪಾಧ್ಯಕ್ಷ ಗಜಾನನ ನಾಯಕ್, ಸದಸ್ಯರಾದ ಮಂಜುನಾಥ ಭಂಡಾರಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನರಸಿಂಹ ಹೆಗಡೆ ಹಾಗೂ ಮಠದ ವ್ಯವಸ್ಥಾಪಕ ಶ್ರೀರಾಧಾರಮಣ ಉಪಾಧ್ಯಾಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next