Advertisement

ವಿಶ್ವನಾಥ್‌ಗೆ ಚಮಚಾಗಿರಿ ಅಭ್ಯಾಸವಿದೆ: ಜಮೀರ್‌

11:21 PM May 13, 2019 | Team Udayavani |

ಹುಬ್ಬಳ್ಳಿ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಅವರಿಗೆ ಚಮಚಾಗಿರಿ ಮಾಡಿ ಅಭ್ಯಾಸವಾಗಿದೆ. ಅದಕ್ಕಾಗಿಯೇ ಅವರು ಆ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ ವಿಶ್ವನಾಥ್‌ ಚಮಚಾಗಿರಿ ಮಾಡಿದವರು. ಹೀಗಾಗಿ ಆ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಹಕ್ಕು ವಿಶ್ವನಾಥ್‌ಗೆ ಇಲ್ಲ. ನಾವು ಸಿದ್ದರಾಮಯ್ಯ ಕಟ್ಟಾ ಅಭಿಮಾನಿಗಳು. ರಾಜ್ಯದ ಜನ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ ಎಂದರು.

ಕುಮಾರಸ್ವಾಮಿ ಪೂರ್ಣ ಪ್ರಮಾಣದ ಮುಖ್ಯಮಂತ್ರಿ ಆದರೆ ತಲೆ ಕಟ್‌ ಮಾಡ್ಕೊತೀನಿ ಎಂದು ಈ ಹಿಂದೆ ಹೇಳಿದ್ದು ನಿಜ. ಜಮೀರ್‌ ಕೊಟ್ಟ ಮಾತು ಉಳಿಸ್ಕೋತಾರೆ. ಆದರೆ ಪೂರ್ಣ ಸರ್ಕಾರ ರಚನೆ ಆಗಲಿಲ್ಲ. ಶೋಭಾ ಕರಂದ್ಲಾಜೆ ರೀತಿ ನಾನು ಪೊಳ್ಳು ಮನುಷ್ಯನಲ್ಲ.

ಮೇ 23ರಿಂದ 25ರೊಳಗೆ ಯಡಿಯೂರಪ್ಪ ಸರ್ಕಾರ ರಚನೆ ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ. ಒಂದು ದಿನ ಅವರ ಮನೆ ಎದುರು ವಾಚ್‌ಮನ್‌ ಡ್ರೆಸ್‌ ಹಾಕಿಕೊಂಡು ಇರುವೆ ಎಂದಿದ್ದೆ. ನಾನು ಶೋಭಾ ರೀತಿ ಹಿಟ್‌ ಆ್ಯಂಡ್‌ ರನ್‌ ಮಾಡಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next