Advertisement

HD ಕುಮಾರಸ್ವಾಮಿಗೆ ಸಿದ್ದರಾಮಯ್ಯ ಅವರೇ ಟಾರ್ಗೆಟ್‌: ಜಮೀರ್‌

01:02 AM Jul 30, 2024 | Team Udayavani |

ಬೆಂಗಳೂರು: ಯಾವ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರ ಬೀಳುತ್ತಂತೆ? ಮುಡಾದಲ್ಲಿ ಸಿಎಂ ಪಾತ್ರವೇನಿದೆ? ಪರ್ಯಾಯವಾಗಿ ನಿವೇಶನ ಕೊಟ್ಟಿರೋದು ಬಿಜೆಪಿ ಸರ್ಕಾರದ ಅವಧಿಯಲ್ಲಿ, ಸಿದ್ದರಾಮಯ್ಯ ಮೇಲೆ ಕಪ್ಪು ಚುಕ್ಕಿ ಇಲ್ಲ, ಹೀಗಿರುವಾಗ ಅವರು ಏಕೆ ರಾಜೀನಾಮೆ ಕೊಡುತ್ತಾರೆ? ಎಂದು ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಸಚಿವ ಜಮೀರ್‌ ಅಹ್ಮದ್‌ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Advertisement

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಯಾವುದೇ ವಿಷಯ ಇಲ್ಲ. ಅದಕ್ಕೆ ಮುಡಾ ವಿಷಯವನ್ನು ಎಳೆದಾಡುತ್ತಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಬ್ಯಾಕಪ್‌?ಗೆ ನಿಂತಿದ್ದಾರೆ. ಎಚ್‌.ಡಿ.ಕೆಗೆ ಸಿದ್ದರಾಮಯ್ಯ ಸಿಎಂ ಆಗಿರುವುದನ್ನು ಸಹಿಸುವುದಕ್ಕೆ ಆಗ್ತಿಲ್ಲ. ಅವರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದರು.ನಾನು ಎಷ್ಟು ದಿನ ಸಚಿವನಾಗಿ ಇರುತ್ತೇನೋ ಗೊತ್ತಿಲ್ಲ. ಹಾಗೇ ನಾನು ಎಷ್ಟು ದಿನ ಜೀವಂತವಾಗಿ ಇರುತ್ತೇನೋ ಗೊತ್ತಿಲ್ಲ. ಯಾಕೆಂದರೆ ದೇವರು ಹಣೆ ಬರಹವನ್ನು ಬರೆದಿರುತ್ತಾನೆ.

ರಾಜ್ಯದಲ್ಲಿ ಮುಂದಿನ 4 ವರ್ಷ ನಮ್ಮ ಸರ್ಕಾರ ಇರುತ್ತದೆ. ನಾನೇ ಅಲ್ಪಸಂಖ್ಯಾತರ ಮಂತ್ರಿಯಾಗಿ ಕಾರ್ಯಾಚರಿಸುತ್ತೇನೆ ಎನ್ನುವ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next