Advertisement

ವಿಶ್ವನಾಥ್‌ ಕೈ ಬಿಡಲ್ಲ, ಶೀಘ್ರ ಸೂಕ್ತ ಸ್ಥಾನಮಾನ: ಶೆಟ್ಟರ್‌

06:31 AM Jun 19, 2020 | Lakshmi GovindaRaj |

ಕೊಪ್ಪಳ: ಎಚ್‌.ವಿಶ್ವನಾಥ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟು ಗೌರವಿಸಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, “ರಾಜ್ಯ ಕೋರ್‌ ಕಮಿಟಿಯಿಂದ ಹಲವರ  ಹೆಸರು ಸೇರಿದಂತೆ ವಿಶ್ವನಾಥ ಹೆಸರೂ ಚರ್ಚೆಗೆ ಬಂದಿದ್ದವು. ಹೈಕಮಾಂಡ್‌ ಒಂದು ವಿಚಾರದಲ್ಲಿ ನಿರ್ಧಾರ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಆ ಅಭ್ಯರ್ಥಿಗಳನ್ನು ನಾವು ಒಪ್ಪಲಿದ್ದೇವೆ. ವಿಶ್ವನಾಥ್‌ ನಮ್ಮನ್ನು ಬೆಂಬಲಿಸಿ  ಬಂದಿದ್ದಾರೆ. ಪಕ್ಷ ಅವರನ್ನು ಎಂದೂ ಕೈ ಬಿಡುವುದಿಲ್ಲ.

Advertisement

ಅವರಿಗೆ ಸೂಕ್ತ ಗೌರವ ಸಿಗಲಿದೆ. ಹೈಕಮಾಂಡ್‌ ಮಟ್ಟದಲ್ಲಿ ಏನು ನಡೆದಿದೆ ಎನ್ನುವ ವಿಚಾರವನ್ನು ನಾನು ಬಹಿರಂಗವಾಗಿ ಹೇಳಲು ಇಚ್ಛಿಸುವುದಿಲ್ಲ. ಪಕ್ಷ ಒಂದು ನಿರ್ಧಾರ  ಕೈಗೊಂಡಿದೆ ಎಂದರೆ ನಾವು ಅದನ್ನು ಒಪ್ಪಲಿದ್ದೇವೆ’ ಎಂದರು. ರಾಜ್ಯಾದ್ಯಂತ ಇರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಸರ್ವೇ ನಡೆಸಿ ಪರಿಶೀಲಿಸಲಿದ್ದೇನೆ. ಹೊಸ ಕೈಗಾರಿಕೆ ನೀತಿಯಲ್ಲೂ ಈ ಅಂಶ ಪರಿಗಣಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎನ್ನುವ ಅಂಶ ಸೇರ್ಪಡೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next