Advertisement

ವಿಭಿನ್ನ ಮನಸ್ಥಿತಿಯ ಸುತ್ತ ವಿರಾಟ ಪರ್ವ

11:22 AM Aug 06, 2018 | |

“ಮುದ್ದು ಮನಸೇ’ ಎಂಬ ಸಿನಿಮಾ ಬಂದಿರೋದು ನಿಮಗೆ ಗೊತ್ತಿರಬಹುದು. ಅರುಗೌಡ ನಾಯಕರಾಗಿದ್ದ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಚಿತ್ರವನ್ನು ನಿರ್ದೇಶಿಸಿರೋದು ಅನಂತ್‌ ಶೈನ್‌. “ಮುದ್ದು ಮನಸೇ’ ನಂತರ ಅನಂತ್‌ ಶೈನ್‌ ಏನು ಮಾಡುತ್ತಿದ್ದಾರೆ, ಯಾವ ಸಿನಿಮಾ ಆರಂಭಿಸಿದ್ದಾರೆಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಅದು “ವಿರಾಟ ಪರ್ವ’. ಹೌದು, ಅನಂತ್‌ ಶೈನ್‌ “ವಿರಾಟ ಪರ್ವ’ ಎಂಬ ಸಿನಿಮಾವನ್ನು ಸದ್ದಿಲ್ಲದೇ ಆರಂಭಿಸಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಕೂಡಾ ಮಾಡಿಮುಗಿಸಿದ್ದಾರೆ.

Advertisement

ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಈ ಬಾರಿ ಹೊಸ ಜಾನರ್‌ನತ್ತ ವಾಲಿರುವ ಅನಂತ್‌ಶೈನ್‌ ಇಂದಿನ ಟ್ರೆಂಡ್‌ಗೆ ಒಗ್ಗುವಂತಹ ಕಥೆ ಮಾಡಿಕೊಂಡಿದ್ದಾರೆ. ವಿಭಿನ್ನ ಮನಸ್ಥಿತಿಯ ಮೂವರು ಹುಡುಗರ ಸುತ್ತ ಇಡೀ ಸಿನಿಮಾ ಸುತ್ತಲಿದ್ದು, ಹೊಸ ಬಗೆಯ ಕಥೆಯಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಅನಂತ್‌ ಶೈನ್‌ ಅವರಿಗಿದೆ. ಕಥೆಗೆ ತಕ್ಕಂತೆ ವಿಭಿನ್ನ ಲೊಕೇಶನ್‌ಗಳಲ್ಲೂ ಚಿತ್ರೀಕರಣ ಮಾಡಿರುವ ಅನಂತ್‌, ಸದ್ಯ ಉಳಿದ ಭಾಗದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ. 

ಚಿತ್ರದಲ್ಲಿ ಅಭಿನಯ ಪ್ರಮುಖ ಪಾತ್ರ ಮಾಡಿದ್ದಾರೆ. ಈಗಾಗಲೇ ಅಭಿನಯ ಕನ್ನಡದಲ್ಲಿ “ಹುಡುಗರು’, “ಕಿಚ್ಚು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾತು ಬಾರದ ಹಾಗೂ ಶ್ರವಣ ದೋಷವಿರುವ ಅಭಿನಯ “ಕಿಚ್ಚು’ ಸಿನಿಮಾದಲ್ಲಿ ತಮ್ಮ ನಿಜ ಜೀವನದ ಪಾತ್ರವನ್ನೇ ಮಾಡಿದ್ದರು. ಆದರೆ, “ವಿರಾಟ ಪರ್ವ’ ಸಿನಿಮಾದಲ್ಲಿ ತಮ್ಮ ನಿಜ ಜೀವನಕ್ಕೆ ವಿರುದ್ಧವಾದ, ಸವಾಲಿನ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾದುದ್ದಕ್ಕೂ ಪಟಪಟನೇ ಮಾತನಾಡುವ ಪಾತ್ರ ಸಿಕ್ಕಿದೆ.

ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಲಿಪ್‌ ಸಿಂಕ್‌ ಮಾಡುವ ಸಾಮರ್ಥ್ಯ ಅಭಿನಯ ಅವರಿಗಿರುವುದರಿಂದ ಅವರಿಂದಲೇ ಈ ಪಾತ್ರವನ್ನು ಮಾಡಿಸುತ್ತಿದ್ದಾರೆ ಅನಂತ್‌ ಶೈನ್‌.  ಚಿತ್ರದ ಬಗ್ಗೆ ಮಾತನಾಡುವ ಅನಂತ್‌, “ಚಿತ್ರ ತುಂಬಾ ನೈಜವಾಗಿ ಮೂಡಿಬರುತ್ತಿದೆ. ಕಥೆಗೆ ಪೂರಕವಾದ ಲೊಕೇಶನ್‌ನಲ್ಲೇ ಚಿತ್ರೀಕರಿಸುತ್ತಿದ್ದು, ಹೊಸ ಅಂಶದೊಂದಿಗೆ ಚಿತ್ರ ಸಾಗುತ್ತದೆ’ ಎನ್ನುವುದು ಅನಂತ್‌ ಮಾತು. ಉಳಿದಂತೆ ಈ ಚಿತ್ರದಲ್ಲಿ ಯಶವಂತ್‌ ಶೆಟ್ಟಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರವನ್ನು ಎಸ್‌.ಆರ್‌.ಮೀಡಿಯಾ ಪ್ರೊಡಕ್ಷನ್ಸ್‌ನಡಿ ಸುನೀಲ್‌ ನಿರ್ಮಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next