Advertisement

ಧೋನಿ ಇಂಟಲಿಜೆಂಟ್‌ ಕ್ರಿಕೆಟಿಗ: ಹಾಡಿ ಹೊಗಳಿದ ವಿರಾಟ್‌ ಕೊಹ್ಲಿ 

04:12 PM Jan 14, 2017 | |

ಹೊಸದಿಲ್ಲಿ: ಭಾರತ ತಂಡದ ಏಕದಿನ ಮತ್ತು ಟಿ-20 ನಾಯಕನಾಗಿ ಆಯ್ಕೆಯಾದ ಬಳಿಕ ವಿರಾಟ್‌ ಕೊಹ್ಲಿ ಅವರು ಶನಿವಾರ ಮೊದಲ ಬಾರಿ ಪತ್ರಿಕಾಗೋಷ್ಠಿ ಕರೆದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

Advertisement

‘ನನ್ನ ಮನಸ್ಸು ಮತ್ತು ಉತ್ಸಾಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಕೇವಲ ಪಾತ್ರ ಮಾತ್ರ ಬದಲಾಗಿದೆ. ಡ್ರೆಸ್ಸಿಂಗ್‌ ರೂಮ್‌ನಲ್ಲೂ  ಹೆಚ್ಚೇನು ಬದಲಾವಣೆಯಾಗಿಲ್ಲ.ನಾನು ನಾಯಕನಾಗಿ ಭಾನುವಾರ ಟಾಸ್‌ಗೆ ಹೋಗುತ್ತಿರುವುದು  ಹೆಮ್ಮೆ ಎನಿಸುತ್ತದೆ’ ಎಂದರು. 

ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಹಾಡಿ ಹೊಗಳಿದ ಕೊಹ್ಲಿ,’ಧೋನಿ ಯಾವಾಗಲೂ ಉತ್ತಮ ನಿರ್ಧಾರಗಳನ್ನು ತೆಗದುಕೊಳ್ಳುತ್ತಿದ್ದರು. ಅವರೊಬ್ಬ ಜಗತ್ತಿನ ಬುದ್ದಿವಂತ ಕ್ರಿಕೆಟಿಗ. ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಸಮಯ ಬಂದಾಗ ಅವರ ಸಲಹೆಗಳನ್ನು ಪಡೆಯುತ್ತೇನೆ’ ಎಂದರು. 

‘ಇನ್ನು ಮುಂದೆ ಧೋನಿ ಅವರು ಇನ್ನಷ್ಟು ಸ್ವತಂತ್ರವಾಗಿ ,ಹೆಚ್ಚು ಭರವಸೆಗಳೊಂದಿಗೆ ಅಟವಾಡಲಿದ್ದಾರೆ. ದೊಡ್ಡ ಹೊಡೆತಗಳಿಗೆ ಮುಂದಾಗುವ ಮುನ್ನ 2 ಬಾರಿ ಯೋಚಿಸುವುದಿಲ್ಲ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next