Advertisement

ಮೆಲ್ಬರ್ನ್ ಮೈದಾನದಲ್ಲಿ ಭಾರತದ ರಾಷ್ಟ್ರಗೀತೆ; ವಿಡಿಯೋ ವೈರಲ್

02:55 PM Oct 24, 2022 | Team Udayavani |

ಮುಂಬಯಿ: ಭಾರತೀಯ ರಾಷ್ಟ್ರಗೀತೆ “ಜನ ಗಣ ಮನ” ಹಾಡಿದಾಗ ಅಥವಾ ನುಡಿಸುವಾಗ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿ ಮತ್ತು ಹೆಮ್ಮೆಯ ಭಾವವನ್ನು ಪ್ರಚೋದಿಸುತ್ತದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದೊಂದಿಗಿನ ಕ್ರಿಕೆಟ್ ಪಂದ್ಯವಾದರೆ ದೇಶಭಕ್ತಿಯ ಮೀಟರ್ ಗಗನಕ್ಕೇರುತ್ತದೆ.

Advertisement

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ಥಾನ ಟಿ 20 ವಿಶ್ವಕಪ್ ಪಂದ್ಯದಲ್ಲೂ ಇದೇ ರೀತಿಯ ದೃಶ್ಯ ಕಂಡುಬಂದಿದ್ದು, ನಾವೆಲ್ಲರೂ ಎದ್ದೇಳುವ ದೇಶ ಮತ್ತು ಗೀತೆ ಎಂಬ ಶೀರ್ಷಿಕೆಯೊಂದಿಗೆ ಮುಂಬೈ ಪೊಲೀಸರು ಟ್ವಿಟರ್‌ನಲ್ಲಿ ಹಂಚಿಕೊಂಡ ಕ್ಲಿಪ್ ವೈರಲ್ ಆಗಿದೆ.

ಭಾರತ ವಿರಾಟ್ ಕೊಹ್ಲಿ ಅವರ ಸಾಹಸದಿಂದ ರೋಚಕ ಜಯ ಸಾಧಿಸಿದ ಪಂದ್ಯಕ್ಕೆ 90 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸಾಕ್ಷಿಯಾಗಿದ್ದರು. ಭಾರತೀಯರು ಎದ್ದು ನಿಂತು ಭಾರತದ ತ್ರಿವರ್ಣ ಧ್ವಜಗಳನ್ನು ಬೀಸುತ್ತಾ ರಾಷ್ಟ್ರಗೀತೆಯನ್ನು ಹಾಡುತ್ತಿರುವ ದೃಶ್ಯ  ಹೆಮ್ಮೆಯ ಕ್ಷಣವಾಗಿತ್ತು. ಇದು ಮೈದಾನದಲ್ಲಿರುವ ಭಾರತೀಯರಿಗೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಪಂದ್ಯವನ್ನು ವೀಕ್ಷಿಸುತ್ತಿರುವ ಕೋಟ್ಯಂತರ ಭಾರತೀಯರಿಗೆ ‘ಗೂಸ್‌ಬಂಪ್ಸ್’ ಕ್ಷಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next