Advertisement

ಜಾಮೀನು ಆದೇಶ ಪ್ರತಿ ಬಾರದ್ದಕ್ಕೆ ವಿನಯ್‌ಗೆ ಸಿಗ್ಲಿಲ್ಲ ಜೈಲು ಬಿಡುಗಡೆ ಭಾಗ್ಯ

08:28 PM Aug 19, 2021 | Team Udayavani |

ಬೆಳಗಾವಿ: ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕರೂ ಗುರುವಾರ ಬಿಡುಗಡೆ ಭಾಗ್ಯ ಸಿಗಲಿಲ್ಲ. ಕೋರ್ಟ್ ಆದೇಶ ಪ್ರತಿ ಭಾರದ್ದಕ್ಕೆ ಆ. 20ರಂದು ಬೆಳಗ್ಗೆ 10 ಗಂಟೆಗೆ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ.

Advertisement

ಹಿಂಡಲಗಾ ಜೈಲಿಗೆ ಕೋರ್ಟ್ ಆದೇಶದ ಪ್ರತಿ ಇ-ಮೇಲ್ ಮೂಲಕ ಬಾರದ್ದಕ್ಕೆ ಬಿಡುಗಡೆಯನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಇ-ಮೇಲ್ ಬರುವಿಕೆಗಾಗಿ ಹಿಂಡಲಗಾ ಜೈಲು ಸಿಬ್ಬಂದಿ ಸಂಜೆ ಆರು ಗಂಟೆಯವರೆಗೂ ಕಾಯ್ದಿದ್ದಾರೆ. ಆದರೆ ಆದೇಶ ಬಾರದ್ದಕ್ಕೆ ಬಿಡುಗಡೆ ಮಾಡಿಲ್ಲ ಎಂದು ಜೈಲು ಅಧೀಕ್ಷಕ ಕೃಷ್ಣಕುಮಾರ ತಿಳಿಸಿದರು.

ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ 5 ನವೆಂಬರ್ 2020ರಂದು ಹಿಂಡಲಗಾ ಜೈಲಿಗೆ ಕರೆ ತಂದಿದ್ದರು. 9 ತಿಂಗಳಿಂದ ಜೈಲಿನಲ್ಲಿಯೇ ಇರುವ ವಿನಯ ಜಾಮೀನಿಗಾಗಿ ಅನೇಕ ಸಲ ಅರ್ಜಿ ಹಾಕಿದ್ದರು. ಆದರೆ ಕೋರ್ಟ್ ಆದೇಶ ನೀಡಿದ್ದರೂ ಜೈಲಿಗೆ ಪ್ರತಿ ಬಂದು ತಲುಪಿಲ್ಲ.

ಶುಕ್ರವಾರ ಆ. 20ರಂದು ಬೆಳಗ್ಗೆ 10 ಗಂಟೆಗೆ ಹಿಂಡಲಗಾ ಜೈಲು ಆವರಣದಲ್ಲಿ ವಿನಯ್ ಕುಲಕರ್ಣಿ ಬೆಂಬಲಿಗರು, ಅಭಿಮಾನಿಗಳು ಸೇರುವಂತೆ ವಾಟ್ಸಪ್‌ನಲ್ಲಿ ಸ್ಟೇಟಸ್ ಹರಿದಾಡುತ್ತಿವೆ. ವಿನಯ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿದ್ದಾರೆ. ವಿನಯ್ ಅವರನ್ನು ಜೈಲಿನಿಮದ ಅದ್ಧೂರಿಯಾಗಿ ಬರಮಾಡಿಕೊಳ್ಳುವ ಬಗ್ಗೆ ಸಿದ್ಧತೆ ನಡೆಸಿದ್ದಾರೆ. ಬಿಡುಗಡೆಯಾದ ಬಳಿಕ ವಿನಯ್ ಅವರು ಬೆಳಗಾವಿಯಿಂದ ಬೆಂಗಳೂರಿಗೆ ತೆರಳುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next