Advertisement

ಬರುವೆನೆಂದು ಬಾರದ ಸಚಿವ; ಕಾಯುತ್ತ ಕುಳಿತಿದ್ದ ನಿವಾಸಿಗಳು

04:23 PM Jan 13, 2021 | Team Udayavani |

ಹುಬ್ಬಳ್ಳಿ: ಗೋಕುಲ ರಸ್ತೆ ಜಗದೀಶ ನಗರ ಬಡಾವಣೆ ನಿವಾಸಿಗಳು ವಸತಿ ಸಚಿವ ವಿ. ಸೋಮಣ್ಣ ಅವರು ಬಡಾವಣೆಗೆ ಭೇಟಿ ಕೊಡುವುದಾಗಿ ಭರವಸೆ ನೀಡಿದ್ದರಿಂದ ಮಂಗಳವಾರ ಬೆಳಗ್ಗೆ 7 ಗಂಟೆಯಿಂದಲೇ ಅವರ ಬರುವಿಕೆಗಾಗಿ ಕಾಯುತ್ತ ಕುಳಿತಿದ್ದರು.
ಆದರೆ, ಸಚಿವರು ಸ್ಥಳಕ್ಕೆ ಬಾರದೆ ನೇರವಾಗಿ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದರು.

Advertisement

ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರ ಮಾಡುವಂತೆ ಆಗ್ರಹಿಸಿ ಜಗದೀಶನಗರ ಆಶ್ರಯ ಬಡಾವಣೆ ನಿವಾಸಿಗಳು ಸೋಮವಾರ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದರು. ಆಗ ಸಚಿವರು ಮಂಗಳವಾರ ಬೆಳಗ್ಗೆ ಬಾಗಲಕೋಟೆಗೆ ತೆರಳುವ ಮುನ್ನ ನಿಮ್ಮ ಬಡಾವಣೆಗೆ ಭೇಟಿಕೊಟ್ಟು ಪರಿಶೀಲಿಸುವೆ ಎಂದು ಭರವಸೆ ಕೊಟ್ಟಿದ್ದರು. ಜೊತೆಗೆ ಮಾಧ್ಯಮದವರಿಗೂ ಈ ವಿಷಯ ತಿಳಿಸಿದ್ದರು.

ಇದನ್ನೂ ಓದಿ:ಬಿಎಸ್ ವೈ ಸಂಪುಟಕ್ಕೆ ‘ಸಪ್ತ ಸಚಿವರ ಬಲ’: ನೂತನ ಸಚಿವರ ಪ್ರಮಾಣ ವಚನ

ಆದರೆ, ಮಂಗಳವಾರ ಸಚಿವರು ಮಾತ್ರ ಬಡಾವಣೆಗೆ ಭೇಟಿ ಕೊಡದೆ ನೇರವಾಗಿ ಬಾಗಲಕೋಟೆಗೆ ಪ್ರಯಾಣಿಸಿದರು. ಅವರ ಬರುವಿಕೆಗಾಗಿ ಬೆಳಗ್ಗೆ 7 ಗಂಟೆಯಿಂದಲೇ ಕೆಲಸ ಬಿಟ್ಟು ಕುಳಿತಿದ್ದ ನಿವಾಸಿಗಳು, ಇತ್ತ ಸಚಿವರು ಬರಲಿಲ್ಲ. ಒಂದು ದಿನದ
ದುಡಿಮೆ ಕಳೆದುಕೊಂಡೆವು. ಕಳೆದ 20 ವರ್ಷಗಳಿಂದ ನಮ್ಮದು ಇದೇ ಆಗೈತಿ ಎಂದು ನಿರಾಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next