Advertisement

ಬಡ ಕುಟುಂಬದ ಮನೆ ಮೇಲ್ಛಾವಣಿ ನಿರ್ಮಿಸಿದ ಗ್ರಾಮಸ್ಥರು

10:38 PM Mar 20, 2021 | Team Udayavani |

ಅರಂತೋಡು: ತೊಡಿಕಾನ ಗ್ರಾಮದ ಚಾಂಬಾಂಡು ಗೋಪಾಲ ಸಫ‌ಲ್ಯ ಕುಟುಂಬ ಬಡತನದಿಂದ ಬಳಲುತ್ತಿದ್ದು, ಅವರ ಕುಸಿದ ಮನೆಯ ಮೇಲ್ಛಾವಣಿಯನ್ನು ಊರವರು ಉಚಿತವಾಗಿ ನಿರ್ಮಿಸಿಕೊಟ್ಟು ಮಾನ ವೀಯತೆ ಮೆರೆದಿದ್ದಾರೆ.

Advertisement

ಗೋಪಾಲ ಅವರ ಪುತ್ರ ಹರೀಶ ಎರಡು ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಇದೀಗ ವೃದ್ಧ ಗೋಪಾಲ ಅವರಿಗೆ ಅನಾರೋಗ್ಯ ಕಾಡುತ್ತಿದ್ದು, ಕೆಲಸ ಮಾಡಲು ಆಗುತ್ತಿಲ್ಲ. ಪತ್ನಿ ಮಾನಸಿಕವಾಗಿ ಅಸ್ವಸ್ಥ ಗೊಂಡಿದ್ದಾರೆ. ಸೊಸೆಯೊಬ್ಬಳು ಬೀಡಿ ಕಟ್ಟಿ ಕುಟುಂಬ ನಿರ್ವಹಣೆ ಮಾಡಬೇಕಾದ ಅನಿ ವಾರ್ಯತೆ ಎದುರಾಗಿದೆ. ಇಬ್ಬರು ಮೊಮ್ಮ ಕ್ಕಳು ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದಾರೆ.  ಈ ಕಷ್ಟಗಳ ನಡುವೆ ಅವರಿಗೆ ಕುಸಿದ ಮನೆಯ ಮೇಲ್ಛಾವಣಿಯನ್ನು ದುರಸ್ತಿ ಮಾಡಿಸಲು ಆರ್ಥಿಕ ಸಮಸ್ಯೆ ಎದುರಾಗಿತ್ತು. ಗ್ರಾ.ಪಂ. ನಲ್ಲಿ ಮನೆ ದುರಸ್ತಿಗೆ ಅನುದಾನ ನೀಡಲು ಅವಕಾಶ ಇಲ್ಲ ಎಂದು ಮಾಹಿತಿ ದೊರೆಯಿತು. ಅರಂತೋಡು ಗ್ರಾ.ಪಂ. ಸದಸ್ಯ ವೆಂಕಟ್ರಮಣ ಅವರ ಗಮನಕ್ಕೆ ಈ ವಿಷಯ ತಿಳಿಯಿತು. ಅವರು ಎ.ಜಿ.ಸುಧಾಕರ, ಸ್ಥಳೀಯ 15 ಜನ ಯುವಕರ ತಂಡ ರಚಿಸಿಕೊಂಡು ಮೇಲ್ಛಾವಣಿ ನಿರ್ಮಿಸಿದರು. ಸುಮಾರು ಮೂರೂವರೆ ದಿನ ಮೇಲ್ಛಾವಣಿ ಕೆಲಸವನ್ನು ಪೂರ್ಣಗೊಳಿಸಿಕೊಟ್ಟಿದ್ದಾರೆ. ಊಟ, ಉಪಾಹಾರದ ಖರ್ಚು, ಮೇಲ್ಛಾವಣಿಗೆ ಬೇಕಾದ ಇತರ ಕೆಲವು ಖರ್ಚನ್ನೂ ತಂಡ ಭರಿಸಿದೆ.

ಗೋಪಾಲ ಸಪಲ್ಯ ಅವರ ಮನೆಯ ಮೇಲ್ಛಾವಣಿ ಕುಸಿದ ಹಿನ್ನೆಲೆಯಲ್ಲಿ ಊರವರು ಸೇರಿಕೊಂಡು ಉಚಿತವಾಗಿ ನಿರ್ಮಿಸಿಕೊಟ್ಟಿದ್ದೇವೆ.   -ವೆಂಕಟ್ರಮಣ ಪೆತ್ತಾಜೆ, ಗ್ರಾ.ಪಂ. ಸದಸ್ಯ, ಅರಂತೋಡು

Advertisement

Udayavani is now on Telegram. Click here to join our channel and stay updated with the latest news.

Next