Advertisement

ಬಸವನಗುಡಿಯಲ್ಲಿ ವಿಕಾಸ ಯಾತ್ರೆ

12:09 PM May 11, 2018 | Team Udayavani |

ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದ  ಸರ್ವಾಂಗೀಣ ಅಭಿವೃದ್ಧಿಯ ಕಸನು ಕಂಡಿರುವ ತಮ್ಮನ್ನು ಈ ಬಾರಿ ಶಾಸಕನಾಗಿ ಆರಿಸುವಂತೆ ಜೆಡಿಎಸ್‌ ಅಭ್ಯರ್ಥಿ ಕೆ. ಬಾಗೇಗೌಡ ಮತಯಾಚಿಸಿದರು. 

Advertisement

ಗುರುವಾರ ಬಸವನಗುಡಿ  ಮುಖ್ಯರಸ್ತೆಯಲ್ಲಿ “ವಿಕಾಸ ರಥಯಾತ್ರೆ’ ನಡೆಸಿ ಬಿರುಸಿನ ಮತಯಾಚನೆ ನಡೆಸಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಹಲವು ನಿರ್ದಿಷ್ಟ ಗುರಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ. ಜನರ ಅಪೇಕ್ಷೆಯಿಂದ ಮೂಲಸೌಕರ್ಯಗಳು, ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಅವರ ಅಗತ್ಯಗಳಿಗೆ ಕೂಡಲೇ ಸ್ಪಂದಿಸಿ ಕಾರ್ಯನಿರ್ವಹಿಸುವ ಭರವಸೆ ನೀಡುತ್ತೇನೆ.

ಹೀಗಾಗಿ ಅಭಿವೃದ್ಧಿಯ ಬದಲಾವಣೆಗಾಗಿ ಶಾಸಕನಾಗಿ ಆಯ್ಕೆ  ಮಾಡುವಂತೆ ಕೋರಿದರು. ಈ ಹಿಂದೆ ಜೆಡಿಎಸ್‌ ಸರ್ಕಾರ ನೀಡಿದ ಕೊಡುಗೆಗಳು ಇನ್ನೂ ಜನರ  ಮನಸಿಂದ ದೂರವಾಗಿಲ್ಲ. ಅದೇ ರೀತಿ ಪಾರದರ್ಶಕ ಹಾಗೂ ಅಭಿವೃದ್ಧಿಯ ಆಡಳಿತದ ಗುರಿಯೇ ತಮ್ಮ ಮೂಲಧ್ಯೇಯವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಉತ್ತಮ ಬೆಂಬಲವ್ಯಕ್ತವಾಗುತ್ತಿದ್ದು,  

ಗೆಲುವು ಸಾಧಿಸುವ ಭರವಸೆಯಿದೆ. ಹೀಗಾಗಿ ಈ ಬಾರಿ ಶಾಸಕನಾಗಿ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಿಧಾನಪರಿಷತ್‌ ಸದಸ್ಯ ಟಿ.ಎ ಶರವಣ, ಪಕ್ಷದ ಮುಖಂಡರಾದ ಎಂ. ರಾಜು,  ಲಲಿತಾ ಶ್ರೀನಿವಾಸ ಅವರು ಬಾಗೇಗೌಡ ಅವರ ಮತಯಾಚನೆಗೆ ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next