Advertisement

ಕನಕನ ಎಣ್ಣೆ ಸಾಂಗ್‌ಗೆ ವಿಜಿ ಕುಣಿತ

10:26 AM Jan 06, 2018 | |

ಆರ್‌.ಚಂದ್ರು ನಿರ್ದೇಶನದ “ಕನಕ’ ಚಿತ್ರದಲ್ಲಿನ “ಎಣ್ಣೆ ನಿಮ್ದು ಊಟ ನಮ್ದು’ ಹಾಡನ್ನು ನೀವು ಕೇಳಿರುತ್ತೀರಿ. ಈ ಹಾಡನ್ನು ಪ್ರಮೋಶನಲ್‌ ಸಾಂಗ್‌ ಆಗಿ ಬಳಸಲು ಚಿತ್ರತಂಡ ನಿರ್ಧರಿಸಿದ್ದರಿಂದ ಚಿತ್ರದ ಕಲಾವಿದರನ್ನು ಹಾಕಿಕೊಂಡು ಈ ಹಾಡನ್ನು ಚಿತ್ರೀಕರಿಸಿರಲಿಲ್ಲ. ಸಂಗೀತ ನಿರ್ದೇಶಕ ನವೀನ್‌ ಸಜ್ಜು ಅವರೇ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

Advertisement

ಈಗ ನಿರ್ದೇಶಕ ಆರ್‌.ಚಂದ್ರು, ಚಿತ್ರದ ನಾಯಕ ವಿಜಯ್‌ ಇತರ ಸಹಕಲಾವಿದರೊಂದಿಗೆ ಆ ಹಾಡನ್ನು ಚಿತ್ರೀಕರಿಸಿದ್ದಾರೆ. ಕಲರ್‌ಫ‌ುಲ್‌ ಸೆಟ್‌ನಲ್ಲಿ ವಿಜಯ್‌, ಬುಲೆಟ್‌ ಪ್ರಕಾಶ್‌, ಕುರಿ ಪ್ರತಾಪ್‌ ಸೇರಿದಂತೆ ಅನೇಕರು “ಎಣ್ಣೆ ನಿಮ್ದು ಊಟ ನಮ್ದು’ ಎಂದು ಹಾಡಿ ಕುಣಿದಿದ್ದಾರೆ. ಎಲ್ಲಾ ಓಕೆ, ಇಷ್ಟು ತಡವಾಗಿ ಈ ಹಾಡನ್ನು ಚಿತ್ರೀಕರಿಸಿದ್ದು ಯಾಕೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರ ಹಾಡು ಹಿಟ್‌ ಆಗಿದ್ದು.

ಚಿತ್ರದ ಈ ಹಾಡು ಬಿಡುಗಡೆಯಾದ ಮೇಲೆ ಹಿಟ್‌ ಆಗಿ ವೈರಲ್‌ ಆಗಿದೆ. ಸಿನಿಪ್ರಿಯರು ತಮ್ಮದೇ ಶೈಲಿಯಲ್ಲಿ ಈ ಹಾಡನ್ನು ಚಿತ್ರೀಕರಿಸಿ, ಸೋಶಿಯಲ್‌ ಮೀಡಿಯಾಗೆ ಅಪ್‌ಲೋಡ್‌ ಮಾಡುತ್ತಿದ್ದಾರೆ. ಚಿತ್ರ ಈ ಮಟ್ಟಕ್ಕೆ ಹಿಟ್‌ ಆಗಿದ್ದನ್ನು ನೋಡಿದ ಚಿತ್ರತಂಡ ಸಿನಿಮಾದಲ್ಲಿ ಈ ಹಾಡು ಇದ್ದರೆ ಪ್ಲಸ್‌ ಆಗುತ್ತದೆಂದುಕೊಂಡು ಈ ಹಾಡನ್ನು ಸೇರಿಸಿದೆ. ಆರಂಭದಲ್ಲಿ ಎರಡು ವಾರ ಬಿಟ್ಟು ಈ ಹಾಡನ್ನು ಸೇರಿಸುವ ಯೋಚನೆ ಇತ್ತಂತೆ. ಆ

ದರೆ, ಈಗ ಸಿನಿಮಾ ಬಿಡುಗಡೆಯಾಗುವಾಗಲೇ ಈ ಹಾಡು ಇರುತ್ತದೆ ಎಂಬ ಮಾಹಿತಿ ನೀಡುತ್ತಾರೆ ಆರ್‌.ಚಂದ್ರು. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನವೀನ್‌ ಸಜ್ಜು ಸಂಗೀತ ನೀಡಿದ್ದಾರೆ. ಚಿತ್ರದ ತಾರಾಬಳಗದಲ್ಲಿ “ದುನಿಯಾ’ ವಿಜಯ್‌, ಹರಿಪ್ರಿಯಾ, ಮಾನ್ವಿತ ಹರೀಶ್‌, ಸಾಧು ಕೋಕಿಲ, ರಂಗಾಯಣ ರಘು, ರವಿಶಂಕರ್‌, ಶ್ರೀನಿವಾಸಮೂರ್ತಿ, “ಉಗ್ರಂ’ ಮಂಜು,  ಪದ್ಮಜಾ ರಾವ್‌, ಸುಧಾ ಬೆಳವಾಡಿ ಮುಂತಾದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next