Advertisement

Vijayapura; ಸಿಎಂ ಸಿದ್ದುಗೆ ಸದ್ಬುದ್ಧಿ ನೀಡಿದ ಶ್ರೀರಾಮ: ಯತ್ನಾಳ್

06:58 PM Jan 14, 2024 | Shreeram Nayak |

ವಿಜಯಪುರ:ನಾನು ಗೌರವಾನ್ವಿತವಾಗಿ ಸನ್ಮಾನ್ಯ ಸಿದ್ದರಾಮಯ್ಯ ಎಂದೇ ಮಾತನಾಡುತ್ತೇನೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ನನ್ನ ಕರೆದಿಲ್ಲ, ಹೋಗಲ್ಲ ಎಂದು ಅವರು ಹೇಳಿದ್ದಾರೆ. ಉದ್ಘಾಟನೆ ಕಾರ್ಯಕ್ರಮ ಮುಗಿದ ನಂತರ ಹೋಗುವುದಾಗಿ ಹೇಳಿದ್ದಾರೆ. ಅಷ್ಟಾದರೂ ಶ್ರೀರಾಮಚಂದ್ರ ಅವರಿಗೆ ಸದ್ಬುದ್ಧಿ ನೀಡಿದ್ದಾನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಂಸ್ಕೃತಿ ಎನ್ನುವುದು ಇಲ್ಲ. ಅಲ್ಲದೇ ರಾಮಮಂದಿರ ಉದ್ಘಾಟನೆಗೆ ಹೋಗಬೇಕಾದ್ರೆ ಹೈಕಮಾಂಡ್‌ ಅನುಮತಿ ಬೇಕೆಂದು ಸಚಿವರು ಹೇಳುತ್ತಾರೆ. ಇದು ನಾಚಿಕೆಗೇಡಿ ಸಂಗತಿ. ಸಾಯಬೇಕಾದರೂ ಸೋನಿಯಾ ಗಾಂಧಿ ಅನುಮತಿ ಕೇಳುತ್ತಾರಾ? ಕಾಂಗ್ರೆಸ್‌ ಗುಲಾಮಗಿರಿ ಸಂಕೇತ, ಬಿಜೆಪಿ ಸ್ವಾಭಿಮಾನದ ಸಂಕೇತ. ಸಿದ್ದರಾಮಯ್ಯ ಭಟ್ಕಳದ ಭಯೋತ್ಪಾದಕನೊಬ್ಬನಿಗೆ “ಅವರು’, “ಇವರು’ ಎಂದು ಮರ್ಯಾದೆಯಿಂದ ಮಾತನಾಡುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಮಾತನಾಡಿರುವ ಸಂಸ್ಕೃತಿ ಕುರಿತು ಹೇಳುವ ಸಿದ್ದರಾಮಯ್ಯ ತಮ್ಮ ಸಂಸ್ಕೃತಿ ಬದಲಾವಣೆ ಮಾಡಿಕೊಳ್ಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next