Advertisement

ವಿಜಯಪುರ : ಫಲಿತಾಂಶಕ್ಕೆ ಮುನ್ನವೇ ಅಭ್ಯರ್ಥಿ ಸಾವು

09:44 PM Dec 30, 2020 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆ ಮತ ಎಣಿಕೆ ಮುಂದುವರಿದ್ದು, ಫಲಿತಾಂಶಕ್ಕೆ ಮುನ್ನವೇ ಸ್ಪರ್ಧಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ಫಲಿತಾಂಶಕ್ಕೂ ಮುನ್ನವೇ ಮೃತಪಟ್ಟ ಅಭ್ಯರ್ಥಿಯನ್ನು ಇಂಡಿ ತಾಲೂಕಿನ ತೆನಹಳ್ಳಿ ಗ್ರಾ.ಪಂ. 1ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ 55 ವರ್ಷದ ಹಫೀಜ್ ಅಹ್ಮದ್ ಖುರೇಶಿ ಎಂದು ಗುರುತಿಸಲಾಗಿದೆ.

ಇಂಡಿ ಪಟ್ಟಣದಲ್ಲಿ ನಡೆಯುತ್ತಿದ್ದ ಮತ ಎಣಿಕೆ ಕೇಂದ್ರದಲ್ಲಿದ್ದ ಹಫೀಜ್ ಮತ ಎಣಿಕೆಯಲ್ಲಿ ಏರುಪೇರು ಕಂಡು ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಹ ಮಾರ್ಗ ಮಧ್ಯೆ ಮೃತಪಟ್ಟಿದ್ಧಾರೆ.

ಹಫೀಜ್ ಸಾವಿನ‌ ನಂತರವೂ ಇವರು ಸ್ಪರ್ಧೆ ಮಾಡಿದ ವಾರ್ಡ್ ನ ಮತ ಎಣಿಕೆ ಮುಂದುವರಿದಿದ್ದು, ಮೃತ ಹಫೀಜ್ ಅಲ್ಪ ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next