Advertisement

ವಿಜಯಪುರ ಬಂದ್‌, ಹಿಂಸೆಗೆ ಯತ್ನ; ಸಾರ್ವಜನಿಕರ ಪರದಾಟ 

11:09 AM Dec 23, 2017 | Team Udayavani |

ವಿಜಯಪುರ : ಅಪ್ರಾಪ್ತ ವಯಸ್ಕ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ  ದಲಿತ ಮತ್ತುಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಜಿಲ್ಲಾ ಬಂದ್‌ಗೆ ಶನಿವಾರ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. 

Advertisement

ಕಿಡಿಗೇಡಿಗಳು ಕೆಎಸ್‌ಆರ್‌ಟಿಸಿ ಬಸ್ಸೊಂದಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಬಸ್‌ ತಡೆದು ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. 

ನಗರದಾದ್ಯಂತ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿಲ್ಲ.  

ಬಂದ್‌ ಮಾಹಿತಿ ಇಲ್ಲದೆ ಗೋಲ್‌ಗ‌ುಂಬಜ್‌ ಸೇರಿದಂತೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಬಂದ ಪ್ರವಾಸಿಗರು  ಪರದಾಡಬೇಕಾಗಿದೆ.  

ದಲಿತ ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆನಡೆಸುತ್ತಿದ್ದಾರೆ. 

Advertisement

ಜಿಲ್ಲಾದ್ಯಂತವ್ಯಾಪಕ ಪೊಲೀಸ್‌ ಬಂದೋಬಸ್ತ ಕೈಗೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next