Advertisement

19ರಂದು ಸಮಾಧಾನದಲ್ಲಿ ವಿಜಯದಶಮಿ

11:27 AM Oct 15, 2018 | Team Udayavani |

ಕಲಬುರಗಿ: ನಗರದ ಕೆಸರಟಗಿ ರಸ್ತೆಯ ಅಟಲ್‌ ಬಿಹಾರಿ ವಾಜಪೇಯಿ ಜಿಡಿಎ ಬಡಾವಣೆ ಪಕ್ಕದ ಸಮಾಧಾನದಲ್ಲಿ ಅ. 19ರಂದು ಶುಕ್ರವಾರ ಮಧ್ಯಾಹ್ನ 12:30ಕ್ಕೆ ಮೌನಯೋಗಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳ ಸನ್ನಿಧಾನ, ನೇತೃತ್ವದಲ್ಲಿ ವಿಜಯದಶಮಿಯ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.

Advertisement

ಇದಕ್ಕೂ ಮುನ್ನ ಬೆಳಗ್ಗೆ 6ಕ್ಕೆ ಕಳೆದ 45 ದಿನಗಳಿಂದ ಸಮಾಧಾನದ ಧ್ಯಾನ ಮಂದಿರದಲ್ಲಿ ನಡೆದು ಬರುತ್ತಿರುವ ಸಹಸ್ರ ರುದ್ರಪಠಣದ ಸಮಾರೋಪ ನಡೆಯಲಿದೆ. ನಂತರ ಬೆಳಗ್ಗೆ 11ಕ್ಕೆ ಗುರು ಮಾಸಾಚರಣೆ ಸಮಾರೋಪ ಹಾಗೂ ಗುರು ವಂದನಾ ಕಾರ್ಯಕ್ರಮ ನಡೆಯಲಿದೆ. ಮಕ್ಕಳು ಹಾಗೂ ಯುವಕರಲ್ಲಿ ಕಳೆದ 10 ವರ್ಷಗಳಿಂದ ವರ್ಷಂಪ್ರತಿ ವಾರಗಳ ಕಾಲ ನಡೆಸಿಕೊಂಡು ಬರುತ್ತಿರುವ ಪುರಾತನ ಸಂಸ್ಕಾರದ ಶಿಬಿರದ ಸಮಾರೋಪವು ಅಕ್ಟೋಬರ್‌ 17ರಂದು ಮಧ್ಯಾಹ್ನ 2ಕ್ಕೆ ಸಮಾಧಾನದಲ್ಲಿ ನಡೆಯಲಿದೆ.

ದಕ್ಷಿಣ ಭಾರತದಲ್ಲಿಯೇ ಅಪರೂಪವಾಗಿರುವ ಧ್ಯಾನ ಮಂದಿರಕ್ಕೆ ದಿನಾಲು ಧ್ಯಾನಾಸಕ್ತರು ಆಗಮಿಸಿ ಧ್ಯಾನ ಮಾಡುತ್ತಿದ್ದು, ಮಾನಸಿಕ ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ. ಮೌನಯೋಗಿಗಳ ಮಾರ್ಗದರ್ಶನದಲ್ಲಿ ಸಮಾಧಾನದ ಗುರುದೇವ ಸೇವಾ ಸಂಸ್ಥೆ ಬರುವ ಭಕ್ತರಿಗೆ ವ್ಯವಸ್ಥೆ ಕಲ್ಪಿಸಲು ಶ್ರಮಿಸುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next