Advertisement

PM Modi ಕನ್ಯಾಕುಮಾರಿಗೆ ಧ್ಯಾನ ಮಾಡಲು ಹೋಗಿಲ್ಲ: ಶತ್ರುಘ್ನ ಸಿನ್ಹಾ

06:16 PM May 31, 2024 | Team Udayavani |

ಪಾಟ್ನಾ: ‘ಪ್ರಧಾನಿ ಮೋದಿ ಕನ್ಯಾಕುಮಾರಿಗೆ ಧ್ಯಾನ ಮಾಡಲು ಹೋಗಿಲ್ಲ, ಮಾಧ್ಯಮಗಳ ಗಮನ ಸೆಳೆಯಲು ಹೋಗಿದ್ದು ಇದು ಅವರ ಕೊನೆಯ ಉಪಾಯ’ ಎಂದು ಹಿರಿಯ ಬಾಲಿವುಡ್ ನಟ ಮತ್ತು ಅಸನ್ಸೋಲ್ ಲೋಕಸಭಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಟೀಕಿಸಿದ್ದಾರೆ.

Advertisement

“ನಾನು ಪ್ರಧಾನಿಯನ್ನು ಸ್ನೇಹಿತನಂತೆ ನೋಡುತ್ತೇನೆ, ಅವರು ಧ್ಯಾನಕ್ಕೆ ಹೋಗಿಲ್ಲ, ಆದರೆ ಮಾಧ್ಯಮಗಳ ಗಮನ ಸೆಳೆಯಲು ಹೋಗಿದ್ದಾರೆ. ಅವರು ಈ ಹಿಂದೆ ಭೇಟಿ ನೀಡಿದಾಗಲೂ ಅದನ್ನೇ ಮಾಡಿದ್ದಾರೆ. ಕೇದಾರನಾಥಕ್ಕೆ ಹೋದಾಗ ಎಲ್ಲಾ ಟೆಲಿಫೋನ್‌ಗಳು, ಸಂವಹನಗಳು ಮತ್ತು ಮಾಧ್ಯಮದವರೊಂದಿಗೆ ಅವರು ಅಲ್ಲಿ ಹೋಗಿದ್ದರು’ ಎಂದರು.

‘ಕನ್ಯಾಕುಮಾರಿಗೆ ಧ್ಯಾನಕ್ಕೆ ಹೋಗಿರುವುದು ತುಂಬಾ ತಡವಾಯಿತು. ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಪ್ರಯತ್ನಿಸಿದ್ದಾರೆ. ಇದು ಅವರಿಗೆ ಕೊನೆಯ ಉಪಾಯವಾಗಿತ್ತು’ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next