Advertisement

ಜನವರಿ 14 ರಂದು ಸಚಿವ ಶ್ರೀಪಾದ ನಾಯಕ್ ಪತ್ನಿಯ ಅಂತ್ಯಕ್ರೀಯೆ

05:37 PM Jan 13, 2021 | Team Udayavani |

ಪಣಜಿ: ಗೋಕರ್ಣದ ಸಮೀಪದ ಹಿಲ್ಕೂರ್ – ಹೊಸ್ಕಂಬಿ ಕ್ರಾಸ್ ಬಳಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ ರವರ ಪತ್ನಿ ವಿಜಯಾ ನಾಯ್ಕ ರವರ ಅಂತ್ಯಕ್ರಿಯೆ ಜನವರಿ 14 ಗುರುವಾರದಂದು ಪೊಂಡಾ ಸಮೀಪದ ಅಡಪೈಯಲ್ಲಿ ನಡೆಯಲಿದೆ.

Advertisement

ಗುರುವಾರ ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ವಿಜಯಾ ನಾಯ್ಕ ರವರ ಪಾರ್ಥಿವ ಶರೀರವನ್ನು ಪಣಜಿ ಸಮೀಪದ ರಾಯಬಂದರ್ ಸಾಪೇಂದ್ರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ನಂತರ ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಗ್ರಾಮವಾದ ಅಡಪೈಗೆ ತರಲಾಗುವುದು. ಅಲ್ಲಿ ಬೆಳಿಗ್ಗೆ 9.30 ರಿಂದ ಮಧ್ಯಾನ್ಹ 12 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಅಡಪೈಯ ಅವರ ನಿವಾಸದಿಂದ ಸ್ಮಶಾನದ ವರೆಗೆ ಅಂತಿಮ ಮೆರವಣಿಗೆ ನಡೆಯಲಿದೆ ಎನ್ನಲಾಗಿದೆ.

ವಿಜಯಾ ನಾಯ್ಕ ರವರು ತಮ್ಮ ಮೂವರು ಗಂಡುಮಕ್ಕಳಾದ ಸಿದ್ದೇಶ, ಸಾಯೀಶ್ ಮತ್ತು ಯೊಗೇಶ್, ಮತ್ತು ಕುಟುಂಬವನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next