Advertisement

ಲಾಲ್ ಸಿಂಗ್ ಗೆ ಟಾಟಾ ಹೇಳಿದ ಸೇತುಪತಿ : ಅಮೀರ್ ಚಿತ್ರದಿಂದ ಹೊರ ಬಂದಿದ್ಯಾಕೆ ವಿಜಯ್ ?

01:40 PM Feb 17, 2021 | Team Udayavani |

ಮುಂಬೈ : ಎಲ್ಲಾ ಅಂದುಕೊಂಡಂತಾಗಿದ್ದರೆ ಇಷ್ಟೋತ್ತಿಗಾಗಲೇ ಬಾಲಿವುಡ್ ನ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ತೆರೆ ಮೇಲೆ ರಾರಾಜಿಸಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಈ ಚಿತ್ರಕ್ಕೆ ಸ್ವಲ್ಪ ಹಿನ್ನಡೆಯಾಯಿತು. ಇನ್ನೇನು ಕೆಲ ದಿನಗಳಲ್ಲಿಯೇ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ದೊರೆಯಲಿದೆ.

Advertisement

ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ನಾಯಕನಟನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಅವರೂ ನಟಿಸಲಿದ್ದಾರೆ. ಈ ಚಿತ್ರದ ಮೂಲಕ ಅವರೂ ಬಿಟೌನ್ ಅಂಗಳಕ್ಕೆ ಹೆಜ್ಜೆ ಇಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸದ್ಯ ಹೊರಬಿದ್ದಿರುವ ಮಾಹಿತಿ ಪ್ರಕಾರ ವಿಜಯ್ ಸೇತುಪತಿ, ಲಾಲ್ ಸಿಂಗ್ ಚಡ್ಡಾ ಚಿತ್ರದಿಂದ ಹೊರ ನಡೆದಿದ್ದಾರೆ.

ಹೌದು, ಲಾಲ್ ಸಿಂಗ್ ಸಿನಿಮಾ ಸೆಟ್ಟೇರುವ ಮುನ್ನ ಸ್ವತಃ ಅಮೀರ್ ಖಾನ್ ತಮಿಳುನಾಡಿಗೆ ಬಂದು ಸೇತುಪತಿ ಎದುರು ಕುಳಿತು ಚಿತ್ರದ ಕಥೆ ಹಾಗೂ ಅದರಲ್ಲಿ ವಿಜಯ್ ನಿಭಾಯಿಸಲಿರುವ ಪಾತ್ರದ ಪರಿಚಯ ಮಾಡಿದ್ದರು. ಕಥೆ ಕೇಳಿದ ಕೂಡಲೇ ವಿಜಯ್ ಕೂಡ ಚಿತ್ರದಲ್ಲಿ ನಟಿಸಲು ಸಮ್ಮತಿ ಸೂಚಿಸಿದ್ದರು. ಆದರೆ, ಸದ್ಯ ಈ ಚಿತ್ರದಿಂದ ವಿಜಯ್ ಹೊರ ಬಂದಿದ್ದಾರೆ.

ವಿಜಯ್ ಈ ಸಿನೆಮಾ ಕೈ ಬಿಟ್ಟಿರುವುದಕ್ಕೆ ಕಾರಣ ಕೂಡ ಹೇಳಿದ್ದಾರೆ. ಈಗಾಗಲೇ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದರಿಂದ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಡೇಟ್ ಹೊಂದಾಣಿಕೆಯಾಗುತ್ತಿಲ್ಲ. ಈ ಕಾರಣಕ್ಕೆ ಅನಿವಾರ್ಯವಾಗಿ ಸಿನಿಮಾ ಕೈ ಬಿಡಬೇಕಾಗಿದೆ. ಮುಂದೊಂದು ದಿನ ಅಮೀರ್ ಖಾನ್ ಜತೆ ತೆರೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಇನ್ನು ಲಾಲ್ ಸಿಂಗ್ ಚಡ್ಡಾ ಚಿತ್ರದಿಂದ ವಿಜಯ್ ಹೊರಬಂದಿರುವುದಕ್ಕೆ ಬೇರೆ ಕಾರಣ ಇದೆ ಎನ್ನಲಾಗುತ್ತಿದೆ. ಈ ಸಿನಿಮಾದ ಪಾತ್ರಕ್ಕೆ ವಿಜಯ್ ಅವರ ದೇಹದ ತೂಕ ಸರಿಹೊಂದುತ್ತಿರಲಿಲ್ಲವಂತೆ. ಈ ಕಾರಣಕ್ಕೆ ಚಿತ್ರತಂಡ ಇವರನ್ನು ಕೈ ಬಿಡುವ ಯೋಚನೆಯಲ್ಲಿತಂತೆ. ಇದರ ಮುನ್ಸೂಚನೆ ಸಿಕ್ಕ ಕೂಡ ಸೇತುಪತಿ ತಾವೇ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next