Advertisement

ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿದ ನಟ ವಿಜಯ್, ನಟಿ ಶ್ರುತಿ ಹಾಸನ್

07:14 PM Aug 13, 2020 | Mithun PG |

ಹೈದರಬಾದ್: ಟಾಲಿವುಡ್ ಪ್ರಿನ್ಸ್​ ಮಹೇಶ್​ ಬಾಬು ಹಾಗೂ ಸಂಗೀತ ನಿರ್ದೇಶಕ ದೇವಿ ಪ್ರಸಾದ್ ನೀಡಿದ್ದ ಗ್ರೀನ್​ ಇಂಡಿಯಾ ಚಾಲೆಂಜ್​ ಸ್ವೀಕರಿಸಿದ ನಟಿ ಶೃತಿ ಹಾಸನ್, ಹೈದರಬಾದ್ ನಲ್ಲಿರುವ ತಮ್ಮ ಮನೆಯ ಆವರಣದಲ್ಲಿ ಮೂರು ಸಸಿಗಳನ್ನು ನೆಟ್ಟಿದ್ದಾರೆ.  ಮಾತ್ರವಲ್ಲದೆ ನಾಮಿನೇಟ್ ಮಾಡಿರುವುದಕ್ಕೆ ಇಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

Advertisement

ಸೂಪರ್ ಸ್ಟಾರ್ ಮಹೇಶ್ ಬಾಬು ಕಳೆದ ವರ್ಷದಂತೆ ಈ ವರ್ಷವೂ ಈ ಗ್ರೀನ್​ ಇಂಡಿಯಾ ಚಾಲೆಂಜ್​ ಸ್ವೀಕರಿಸಿದ್ದು, ತಮ್ಮ ಹುಟ್ಟುಹಬ್ಬದ ದಿನದಂದೆ ಗಿಡ ನೆಟ್ಟು, ನಟ ವಿಜಯ್, ಜೂ. ಎನ್ ಟಿಆರ್ ​ ಹಾಗೂ ಶ್ರುತಿ ಹಾಸನ್​ ಅವರನ್ನು ನಾಮಿನೇಟ್​ ಮಾಡಿದ್ದರು.

ಇದೀಗ ಶೃತಿ ಹಾಸನ್ ನಟರಾದ ಹೃತಿಕ ರೋಷನ್, ರಾಣಾ ದಗ್ಗುಬಾಟಿ, ನಟಿ ತಮನ್ನಾ ಭಾಟಿಯಾಗೆ ಚಾಲೆಂಜ್ ಹಸ್ತಾಂತರಿಸಿದ್ದು ಸಸಿ ನೆಡುವಂತೆ ಉತ್ತೇಜನ ನೀಡಿದ್ದಾರೆ.

ಪರಿಸರದಲ್ಲಿ ಹಸಿರು ಹೆಚ್ಚಿಸುವ ಸಲುವಾಗಿ ರಾಜ್ಯಸಭಾ ಸದಸ್ಯ ಜೆ. ಸಂತೋಷ್​ ಕುಮಾರ್​ ಆರಂಭಿಸಿರುವ ಗ್ರೀನ್​ ಇಂಡಿಯಾ ಚಾಲೆಂಜ್​ ಅನ್ನು ಸೆಲೆಬ್ರಿಟಿಗಳು ಯಶಸ್ವಿಯಾಗಿ ಮುಂದುವರೆಸುತ್ತಿದ್ದಾರೆ.

Advertisement

ತಮಿಳು ನಟ ವಿಜಯ್ ಕೂಡ ಚಾಲೆಂಜ್ ಸ್ವೀಕರಿಸಿ ಗಿಡ ನೆಟ್ಟು ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದು ಸಾವಿರಾರು ರೀ-ಟ್ವೀಟ್ ಕೂಡ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next