Advertisement

ವಿಧುಶೇಖರ ಭಾರತಿ ಶ್ರೀ ಶೋಭಾಯಾತ್ರೆ

11:12 AM Nov 20, 2018 | Team Udayavani |

ಕಲಬುರಗಿ: ನಗರಕ್ಕೆ ಮೊದಲ ಬಾರಿಗೆ ಆಗಮಿಸಿದ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ ಶೋಭಾಯಾತ್ರೆ ಸೋಮವಾರ ಸರ್ದಾರ್‌ ವಲ್ಲಭಾಯಿ ಪಟೇಲ್‌ ವೃತ್ತದಿಂದ ನೂತನ ವಿದ್ಯಾಲಯ ಸಂಸ್ಥೆ ಆವರಣದವರೆಗೆ ವಿಜೃಂಭಣೆಯಿಂದ ನಡೆಯಿತು.

Advertisement

ಮಹಾಸಂಸ್ಥಾನದ ಕಲಬುರಗಿ ಶಾಖೆ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ವಿಜಯ ಯಾತ್ರೆಯಲ್ಲಿ
ಪಾಲ್ಗೊಳ್ಳಲು ಶ್ರೀ ವಿಧುಶೇಖರ ಭಾರತಿ ಮೊದಲ ಬಾರಿಗೆ ನಗರಕ್ಕೆ ಸೋಮವಾರ ಸಂಜೆ ಆಗಮಿಸಿದರು. ಸರ್ದಾರ್‌ ಪಟೇಲ್‌ ವೃತ್ತದಲ್ಲಿ ಮಂಗಳ ವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. 

ನಂತರ ಶ್ರೀಗಳ ವೈಭವದ ಶೋಭಾಯಾತ್ರೆ ನಡೆಯಿತು. ನೂತನ ವಿದ್ಯಾಲಯ ಸಂಸ್ಥೆ ಆವರಣದಲ್ಲಿ ಧೂಳಿ ಪಾದಪೂಜೆ, ಪ್ರಾರ್ಥನೆ ಮತ್ತು ಸಾರ್ವಜನಿಕರಿಂದ ಶ್ರೀಗಳಿಗೆ ಸನ್ಮಾನ ನಡೆಯಿತು.

ನ. 20ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀಗಳ ದರ್ಶನ, ಮಂತ್ರಾಕ್ಷತೆ, ಭಕ್ತಾದಿಗಳಿಂದ ಪಾದುಕಾ ಪೂಜೆ ಹಮ್ಮಿಕೊಳ್ಳಲಾಗಿದೆ. ಸಂಜೆ 6:00ಕ್ಕೆ ಶಂಕರಾಚಾರ್ಯರ ಅಷ್ಟೋತ್ತರ ಶತನಾಮ ಪಾರಾಯಣ ಹಾಗೂ ಸೌಂದರ್ಯ ಲಹರಿ ಸ್ತೋತ್ರ ಸಮರ್ಪಣೆ ನಡೆಯಲಿದೆ. ನ.21ರಂದು ಶ್ರೀಗಳ ದರ್ಶನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next