Advertisement

Kedarnath ದೇವಾಲಯದ 238 ಕೆಜಿ ಚಿನ್ನ ನಾಪತ್ತೆ: ಶಂಕರಾಚಾರ್ಯ ಆರೋಪಕ್ಕೆ ಟ್ರಸ್ಟ್‌ ಕಿಡಿ

12:59 PM Jul 17, 2024 | Team Udayavani |

ಡೆಹ್ರಾಡೂನ್:‌ ಐತಿಹಾಸಿಕ ಕೇದಾರನಾಥ ದೇವಸ್ಥಾನದ 228 ಕೆಜಿ ಬಂಗಾರ ನಾಪತ್ತೆಯಾಗಿರುವುದಾಗಿ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ಆರೋಪಕ್ಕೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್‌ ಬುಧವಾರ (ಜುಲೈ 17) ಪ್ರತಿಕ್ರಿಯೆ ನೀಡಿದ್ದು, ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.

Advertisement

ಎಎನ್‌ ಐ ಜೊತೆ ಮಾತನಾಡಿದ ಅಜಯ್‌ ಅವರು, ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ಆರೋಪದಂತೆ ಕೇದಾರನಾಥ ದೇವಾಲಯದಲ್ಲಿನ ಚಿನ್ನ ನಾಪತ್ತೆಯಾಗಿರುವುದು ತುಂಬಾ ದುರದೃಷ್ಟಕರ ಸಂಗತಿಯಾಗಿದೆ. ಈ ಬಗ್ಗೆ ಅವರ ಸತ್ಯವನ್ನು ಬಯಲಿಗೆಳೆಯಲಿ ಎಂದು ಆಗ್ರಹಿಸಿದ್ದಾರೆ.

ಚಿನ್ನ ನಾಪತ್ತೆಯಾಗಿರುವ ವಿಷಯವನ್ನು ಹೀಗೆ ಹೇಳಿಕೆ ನೀಡುವ ಬದಲು ಅವಿಮುಕ್ತೇಶ್ವರಾನಂದ ಸ್ವಾಮಿ ಅವರು ಆಡಳಿತ ಮಂಡಳಿಗೆ ದೂರು ನೀಡಿ, ತನಿಖೆ ನಡೆಸಲು ಒತ್ತಾಯಿಸಲಿ. ಅಲ್ಲದೇ ಅವರ ಬಳಿ ಸಾಕ್ಷ್ಯಗಳಿದ್ದರೆ ಸುಪ್ರೀಂಕೋರ್ಟ್‌ ಅಥವಾ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಲಿ ಎಂದು ಅಜೇಂದ್ರ ತಿಳಿಸಿದ್ದಾರೆ.

Advertisement

ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಅವರಿ ಕೇದಾರನಾಥ್‌ ಧಾಮ್‌ ನ ಪಾವಿತ್ರ್ಯತೆಗೆ ಧಕ್ಕೆ ತರುವ ಹಕ್ಕಿಲ್ಲ ಎಂದು ಅಜೇಂದ್ರ ತಿರುಗೇಟು ನೀಡಿದ್ದು, ಒಂದು ವೇಳೆ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ರಾಜಕೀಯ ಅಜೆಂಡಾ ಇಟ್ಟುಕೊಂಡಿದ್ದರೆ, ಇದು ತುಂಬಾ ದುರಾದೃಷ್ಟಕರ ಎಂದು ಅಜೇಂದ್ರಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next