Advertisement

“ಮಾ.4: ಜನವಿರೋಧಿ ನೀತಿ ವಿರುದ್ಧ ವಿಧಾನಸೌಧ ಚಲೋ’

11:46 PM Feb 13, 2021 | Team Udayavani |

ಉಡುಪಿ : ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ಮಾ.4ರಂದು ವಿಧಾನಸೌಧ ಚಲೋ ಕಾರ್ಯಕ್ರಮ ವನ್ನು ನಡೆಸಲಾಗುವುದು. ಅಕ್ಷರದಾಸೋಹಕ್ಕೆ ಸರಕಾರ ಯಾವ ಸವಲತ್ತುಗಳನ್ನೂ ಒದಗಿಸುತ್ತಿಲ್ಲ ದೇಶದ ಜನರಲ್ಲಿ ರಾಮಮಂದಿರದ ಕನಸು ಬಿತ್ತಲಾಗುತ್ತಿದೆ. ಆದರೆ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅಕ್ಷರದಾಸೋಹ ಮಕ್ಕಳ
ಭವಿಷ್ಯದ ಯೋಜನೆಯಾಗಿದ್ದು, ಇದನ್ನು ಖಾಯಂಗೊಳಿಸಬೇಕು ಎಂದು ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಹಾಗೂ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ವರಲಕ್ಷ್ಮೀ ಹೇಳಿದರು.

Advertisement

ಸಿಐಟಿಯು ವತಿಯಿಂದ ಬನ್ನಂಜೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಶನಿವಾರ ನಡೆದ ಅಕ್ಷರದಾಸೋಹ ನೌಕರರ 5ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಅಕ್ಷರದಾಸೋಹ ಯೋಜನೆಗೆ ಯಾವುದೇ ಸವಲತ್ತು ಕಲ್ಪಿಸಿಲ್ಲ. ದೇಶ
ದಲ್ಲಿಂದು ಸಾಮಾಜಿಕ ಅಸಮಾನತೆ, ಆದಾಯದ ತಾರತಮ್ಯದಿಂದ ಬಡತನ ಇದೆ. ಅಕ್ಷರದಾಸೋಹ ಯೋಜನೆಗೆ 2020- 21ನೇ ಸಾಲಿನಲ್ಲಿ 12,500 ಕೋ.ರೂ. ವೆಚ್ಚವಾಗಿದೆ. ಈ ಬಾರಿ ಮೊತ್ತವನ್ನು ಹೆಚ್ಚಿಸಬೇಕಿತ್ತು. ಆದರೆ 1,400 ಕೋ.ರೂ.ಗಳನ್ನು ಹಿಂಪಡೆದಿದ್ದಾರೆ. ಕಲ್ಯಾಣ ರಾಜ್ಯದ ಕಲ್ಪನೆ ಕೇವಲ ಭರವಸೆಗಷ್ಟೇ ಸೀಮಿತವಾಗುತ್ತಿದೆ ಎಂದರು. ದೇಶದಲ್ಲಿ 1.77 ಕೋಟಿ ಮಕ್ಕಳು ಹಾಗೂ ರಾಜ್ಯದಲ್ಲಿ 50ಲಕ್ಷ ಮಕ್ಕಳು ಅಕ್ಷರದಾಸೋಹ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿ ದ್ದಾರೆ. 26 ಲಕ್ಷ ಮಂದಿ ನೌಕರರಿದ್ದು, ಅವರಿಗೆ 2,600 ರೂ.ವೇತನ ನೀಡ ಲಾಗುತ್ತಿದೆ. ಆದರೆ 2011ರಿಂದಲೂ ಈ ವೇತನ ಹೆಚ್ಚಳವಾಗದಿರುವುದು ಮಾತ್ರ ವಿಪರ್ಯಾಸ ಎಂದರು.

ಜಿಲ್ಲಾ ಸಿಐಟಿಯು ಉಪಾಧ್ಯಕ್ಷ ಪಿ.ವಿಶ್ವನಾಥ ರೈ ಮಾತನಾಡಿ, ಸರಕಾರಕ್ಕೆ ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಪ್ರತಿಯೊಬ್ಬರೂ ಫ‌ಲಿತಾಂಶ ಸಿಗುವ ಹೋರಾಟಕ್ಕೆ ಮುಂದಾಗಬೇಕು. ಅಕ್ಷರದಾಸೋಹ ನೌಕರರಿಗೆ ಕನಿಷ್ಠ 21 ಸಾವಿರ ರೂ.ವೇತನ ನೀಡಬೇಕು ಎಂದು ಆಗ್ರಹಿಸಿದರು. ಈ ಯೋಜನೆ ಕೇಂದ್ರ ಸರಕಾರದ್ದೇ ಆದರೂ ಕೂಡ ಕೇಂದ್ರ ಸರಕಾರಿ ಅಕ್ಷರದಾಸೋಹ ನೌಕರರಿಗೆ 10 ವರ್ಷಗಳಿಂದಲೂ 10 ಪೈಸೆಯನ್ನೂ ಕೂಡ ಹೆಚ್ಚಳ ಮಾಡಲಿಲ್ಲ. ಬದಲಿಗೆ ಅನುದಾನವನ್ನು ಕಡಿತ ಮಾಡಿ ಈ ಯೋಜನೆಯನ್ನು ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನಾಗಿ ಮಾಡಲು ಶಿಫಾರಸು ಮಾಡಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಸುರೇಶ್‌ ಕಲ್ಲಾಗರ, ಗೌರವಾಧ್ಯಕ್ಷ ಯು.ದಾಸ ಭಂಡಾರಿ, ಜಿಲ್ಲಾಧ್ಯಕ್ಷೆ ಜಯಶ್ರೀ ಪಡುವರಿ, ಕಾರ್ಯಾಧ್ಯಕ್ಷೆ ನಾಗರತ್ನಾ, ಪ್ರಧಾನ ಕಾರ್ಯದರ್ಶಿ ಸುನಂದಾ, ಕಾರ್ಕಳ ತಾಲೂಕು ಅಧ್ಯಕ್ಷೆ ಬೇಬಿ ಭಂಡಾರಿ, ಕಾರ್ಯದರ್ಶಿ ಜ್ಯೋತಿ, ಕುಂದಾಪುರ ತಾಲೂಕು ಅಧ್ಯಕ್ಷೆ ಸಿಂಗಾರಿ, ಕಾರ್ಯದರ್ಶಿ ಲತಾ, ಸಿಐಟಿಯುನ ಬಾಲಕೃಷ್ಣ ಶೆಟ್ಟಿ, ಕವಿರಾಜ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next