Advertisement

ನಾಯ್ಡು ನನ್ನೊಂದಿಗೆ ಚರ್ಚೆಗೆ ಬರಲಿ: ಗೋಪಾಲಕೃಷ್ಣ ಗಾಂಧಿ

08:35 AM Jul 29, 2017 | Team Udayavani |

ಹೊಸದಿಲ್ಲಿ: ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರು ನನ್ನೊಂದಿಗೆ ಚರ್ಚೆಗೆ ಬರಲಿ. ಟಿವಿಯಲ್ಲಿ ಇಬ್ಬರೂ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮುಖಾಮುಖೀಯಾಗಿ ಚರ್ಚಿಸೋಣ ಎಂದು ಪ್ರತಿಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಹೇಳಿದ್ದಾರೆ. ಇಂತಹ ಚರ್ಚೆ ಆಯೋಜಿಸುವಂತೆ ರಾಜ್ಯಸಭಾ ಟಿವಿಗೆ ಮನವಿ ಮಾಡಿರುವುದಾಗಿಯೂ ಅವರು ತಿಳಿಸಿದ್ದಾರೆ.

Advertisement

ಅಭ್ಯರ್ಥಿಗಳ ನಡುವೆ ಇಂಥ ಚರ್ಚೆ ನಡೆದರೆ, ಅವರ ಸಾಮರ್ಥ್ಯದ ಬಗ್ಗೆ ಸಂಸದರಿಗೆ ಮನದಟ್ಟಾಗುತ್ತದೆ. ಯಾರು ಉಪರಾಷ್ಟ್ರಪತಿಯಾಗಲು ಸೂಕ್ತ ಎಂಬುದನ್ನೂ ನಿರ್ಧರಿಸಲು ಸಾಧ್ಯ. ಇದನ್ನು ಚರ್ಚೆಯೆಂದು ಭಾವಿಸದೇ, ಜಂಟಿ ಸಂವಾದವೆಂದು ಭಾವಿಸಿದರೆ ಸಾಕು ಎಂದಿದ್ದಾರೆ ಗಾಂಧಿ. ಈ ನಡುವೆ, ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿರುವ ಪ್ರತಿಪಕ್ಷಗಳ ವಿರುದ್ಧ ವೆಂಕಯ್ಯ ನಾಯ್ಡು ಕಿಡಿಕಾರಿದ್ದಾರೆ. ಕೆಸರಲ್ಲಿ ಇರುವವರಿಗೆ ಬಿಳಿ ಶರ್ಟು, ಪಂಚೆ ಧರಿಸಿದವರನ್ನು ಕಂಡರೆ ಆಗದು. ನನ್ನ ಮಗನ ವಹಿವಾಟಿನಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next