Advertisement

ದೆಹಲಿಯತ್ತ ಪ್ರಯಾಣ‌ ಬೆಳಸಿದ ಉಪರಾಷ್ಟ್ರಪತಿ ನಾಯ್ಡು..!

10:22 AM Aug 22, 2021 | Team Udayavani |

ಹೊಸಪೇಟೆ  : ಮೂರು ದಿನಗಳ ಹಂಪಿ ಪ್ರವಾಸದಲ್ಲಿದ್ದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು  ಇಂದು(ಭಾನುವಾರ, ಆಗಸ್ಟ್ 22) ಬೆಳಿಗ್ಗೆ ಸೇನಾ ಹೆಲಿಕ್ಯಾಪ್ಟರ್ ಮೂಲಕ ದೆಹಲಿಯತ್ತ ಪ್ರಯಾಣ‌ ಬೆಳಸಿದ್ದಾರೆ.

Advertisement

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ.ಉಷಾ ಹಾಗೂ ಅವರ ಕುಟುಂಬ ಮತ್ತು ಉಪರಾಷ್ಟ್ರಪತಿ ಕಚೇರಿಯ ಸಿಬ್ಬಂದಿಯೊಂದಿಗೆ ಮೂರು ವಾಯುಸೇನೆಯ ವಿಶೇಷ ಹೆಲಿಕ್ಯಾಪ್ಟರ್ ಗಳಲ್ಲಿ ನಗರದ ಮುನ್ಸಿಪಲ್ ಮೈದಾನದ ತಾತ್ಕಾಲಿಕ ಹೆಲಿಪ್ಯಾಡ್ ಮೂಲಕ ತೆರಳಿದರು.

ಇದನ್ನೂ ಓದಿ : ಈ ಬಾರಿಯ ಐಪಿಎಲ್ ಗೆ ಜೋಸ್ ಬಟ್ಲರ್ ಗೈರು: ರಾಯಲ್ಸ್ ಗೆ ಗ್ಲೆನ್ ಫಿಲಿಪ್ ಸೇರ್ಪಡೆ

ಆಗಸ್ಟ್ 20 ರಂದು ವಿಜಯನಗರಕ್ಕೆ ಭೇಟಿ‌ ನೀಡಿದ ಗಣ್ಯರು, ತುಂಗಾಭದ್ರಾ ಜಲಾಶಯ, ಹಂಪಿಯ ವಿಶ್ವಪಾರಂಪರಿಕ ಸ್ಥಳಗಳ ವೀಕ್ಷಣೆ‌  ಮಾಡಿ‌‌ದ ಬಳಿಕ ಇದೀಗ ದೆಹಲಿಗೆ ಪ್ರಯಾಣ‌ ಬೆಳಸಿದರು.

ಎಂ.ವೆಂಕಯ್ಯನಾಯ್ಡು ಅವರನ್ನು  ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಬೀಳ್ಕೊಟ್ಟರು.

Advertisement

ಈ ಸಂದರ್ಭದಲ್ಲಿ ಎಸ್ ಪಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ. ಎಸ್. ಮಂಜುನಾಥ, ಎ ಎಸ್ ಪಿ ಬಿ. ಎನ್ . ಲಾವಣ್ಯ, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ಮತ್ತಿತರರು ಇದ್ದರು.

ಬೀಗಿ ಪೊಲೀಸ್ ಬಂದೋಬಸ್ತ್ ನಡುವೆ ಸೇನಾ ಹೆಲಿಕಾಪ್ಟರ್ ದೆಹಲಿಯತ್ತ ತೆರಳಿತು.

ಇದನ್ನೂ ಓದಿ : ಅಫ್ಘಾನ್ ನಿಂದ ಏರ್ ಲಿಫ್ಟ್: ವಿಮಾನದಲ್ಲಿ ಮೊಳಗಿದ ‘ಭಾರತ್ ಮಾತಾ ಕಿ ಜೈ’ ಘೋಷಣೆ

Advertisement

Udayavani is now on Telegram. Click here to join our channel and stay updated with the latest news.

Next