Advertisement

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ರಾಖಿ ಕಟ್ಟಿ ಸಹೋದರತ್ವ ಮೆರೆದ ಭಾಜಪಾ ಮಹಿಳಾ ಘಟಕ

08:23 PM Aug 22, 2021 | Team Udayavani |

ಹೊಸಪೇಟೆ :ವಿಶ್ವ ಪ್ರಸಿದ್ಧ ಹಂಪಿ ಹಾಗೂ ತುಂಗಭದ್ರಾ ಜಲಾಶಯ ವೀಕ್ಷಣೆಗೆ ಕುಟುಂಬ ಸಮೇತ ಆಗಮಿಸಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಭಾಜಪ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶಿವಕೃಷ್ಣ ಅವರು ಭಾನುವಾರ ರಾಖಿ ಕಟ್ಟುವ ಮೂಲಕ ರಕ್ಷ ಬಂಧನ ಹಬ್ಬವನ್ನು ಆಚರಿಸಿದರು.

Advertisement

ಕಳೆದ ಎರಡು ದಿನಗಳ ಕಾಲ  ಹಂಪಿಯ ಸ್ಮಾರಕಗಳನ್ನು ಹಾಗೂ ತುಂಗಭದ್ರಾ ಜಲಾಶಯವನ್ನು ಕಣ್ತುಂಬಿಕೊಂಡ ಭಾಜಪ ಹಿರಿಯ ನಾಯಕರಾದ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಭಾನುವಾರ ವಾಯು ಪಡೆಯ ವಿಶೇಷ ವಿಮಾನದ  ಮೂಲಕ ಹುಬ್ಬಳ್ಳಿಗೆ  ಪ್ರಯಾಣ ಬೆಳೆಸಿದರು.

ಈ ವೇಳೆ ರಕ್ಷಾ ಬಂಧನ ಹಬ್ಬದ ನಿಮಿತ್ತ ಭಾಜಪಾ ರಾಜ್ಯ ಮಹಿಳಾ ಘಟಕದ ಪರವಾಗಿ ಶಿವಕೃಷ್ಣ ಅವರು ರಾಖಿ ಕಟ್ಟಿ ಸಹೋದರತ್ವ ಮೆರೆದು, ಆಶೀರ್ವಾದ ಪಡೆದರು. ಈ  ವೇಳೆ ವೆಂಕಯ್ಯ ನಾಯ್ಡುರವರ ಆರೋಗ್ಯ ಕ್ಷೇಮ ಕುರಿತು ವಿಚಾರಿಸಿ, ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ವಿವಿಧ ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next