Advertisement

Venur;ದಾನಕ್ಕೆ ಪ್ರೇರಣೆ ಮಹಾಮಸ್ತಕಾಭಿಷೇಕ: ಡಾ| ಹೆಗ್ಗಡೆ

12:21 AM Jun 25, 2023 | Team Udayavani |

ಬೆಳ್ತಂಗಡಿ: ಲೌಕಿಕ ಕಾರ್ಯದ ಮೂಲಕ ಧರ್ಮ ಪ್ರಚಾರ ನಡೆಸುವ ಜತೆಗೆ ದಾನಕ್ಕೆ ಪ್ರೇರಣೆಯಾಗಿ ಮಹಾಮಸ್ತಕಾಭಿಷೇಕ ನೆರ ವೇರಿಸುತ್ತೇವೆ. ಈ ಬಾರಿ ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕವು 2024ರ ಫೆಬ್ರವರಿ 22ರಿಂದ ಮಾರ್ಚ್‌ 1ರ ವರೆಗೆ ನೆರವೇರಿಲು ನಿಶ್ಚಯಿಸಿದ್ದೇವೆ ಎಂದು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ವೇಣೂರಿನಲ್ಲಿ ಶನಿವಾರ ನಡೆದ ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಶ್ರಾವಕರ ಸಮಾ ಲೋಚನ ಸಭೆಯನ್ನು ಉದ್ಘಾಟಿಸಿದ ಬಳಿಕ ಮಹಾಮಸ್ತಕಾಭಿಷೇಕದ ದಿನಾಂಕ ಪ್ರಕಟಿಸಿ ಅವರು ಮಾತನಾಡಿದರು.

ಜನಮಂಗಲ ಕಾರ್ಯವಾಗಲಿ
ಹಿಂದೆ ಭೂ ಮಸೂದೆ ಕಾಯ್ದೆ ಬಂದಾಗ ಜೈನ ಸಮುದಾಯ ಆರ್ಥಿಕವಾಗಿ ಸಮರ್ಥವಾಗಿರಲಿಲ್ಲ. ಇಂದು ಸಮುದಾಯ ಆರ್ಥಿಕವಾಗಿ ಸಶಕ್ತವಾಗಿದೆ. 9 ದಿನಗಳ ಕಾಲದ ಮಹಾಮಜ್ಜನದಲ್ಲಿ ಯುವ ಸಮು ದಾಯ ಭಾಗವಹಿಸಿ ತನು, ಮನ, ಧನದಿಂದ ಸಹಕರಿಸುವ ಮೂಲಕ ಮಹಾಮಸ್ತಕಾಭಿಷೇಕದೊಂದಿಗೆ ಜನಮಂಗಲ ಕಾರ್ಯವಾಗಬೇಕು ಎಂದು ಹೆಗ್ಗಡೆ ಸಂದೇಶ ನೀಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮಾತನಾಡಿ, “ಅಹಿಂಸಾ ಪರಮೋ ಧರ್ಮ’ ಎಂದು ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಸಮಾಜ ಜೈನರದ್ದು. ಜೈನರು ಕೃಷಿ ಯಿಂದ ವ್ಯಾಪಾರದತ್ತ ಒಲವು ತೋರಿದ್ದರಿಂದ ಯುವಪೀಳಿಗೆಯಲ್ಲಿ ಮಹಾಮಸ್ತಕಾಭಿಷೇಕ ಮಾಡು ವವರ ಸಂಖ್ಯೆ ಹೆಚ್ಚಾಗಿದೆ. ಮಹಾ ಮಸ್ತಕಾಭಿಷೇಕದ ಮೂಲಕ ಜೈನ ಸಮು ದಾಯದ ಸಂಪ್ರದಾಯ ಪ್ರಪಂಚಕ್ಕೆ ತಿಳಿಸುವ ಕಾರ್ಯವಾಗ ಬೇಕು ಎಂದು ಹೇಳಿದರು.
ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಉಪಾ ಧ್ಯಕ್ಷ, ಅಳದಂಗಡಿ ಅರಮನೆ ತಿಮ್ಮಣ್ಣರಸ ರಾದ ಡಾ| ಪದ್ಮಪ್ರಸಾದ್‌ ಅಜಿಲರು ಪ್ರಸ್ತಾವನೆಗೈದರು. ನ್ಯಾಯ ವಾದಿ, ಕಾರ್ಕಳ ಜೈನ ಧರ್ಮ ಜೋರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ವಿಜಯ ಕುಮಾರ್‌ ಸಲಹೆ ನೀಡಿದರು.

ಸಮಾಜದ ಪ್ರಮುಖರು, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ಬಾಹುಬಲಿ ಯುವಜನ ಸಂಘ, ಜೈನ್‌ ಮಿಲನ್‌ ಹಾಗೂ ಬ್ರಾಹ್ಮಿ ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ. ಪ್ರವೀಣ್‌ ಕುಮಾರ್‌ ಇಂದ್ರ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಮಹಾವೀರ್‌ ಜೈನ್‌ ಮೂಡುಕೋಡಿ ನಿರ್ವಹಿಸಿದರು.

Advertisement

ಅಧ್ಯಕ್ಷರಾಗಿ ಡಾ| ಹೆಗ್ಗಡೆ
ವೇಣೂರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿ ಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಕಾರ್ಯಾಧ್ಯಕ್ಷರಾಗಿ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲ, ಪ್ರಧಾನ ಕಾರ್ಯದರ್ಶಿಯಾಗಿ ವಿ. ಪ್ರವೀಣ್‌ ಕುಮಾರ್‌ ಇಂದ್ರ, ಕೋಶಾಧಿಕಾರಿಯಾಗಿ ಪಿ. ಜಯರಾಜ್‌ ಕಂಬ್ಳಿ ಅವರನ್ನು ಆರಿಸಲಾಯಿತು ಹಾಗೂ 27 ಉಪ ಸಮಿತಿಗಳನ್ನು ರಚಿಸಲಾಯಿತು.

ಜೈನ ಪರಂಪರೆ ಜಗತ್ತಿಗೆ ಪಸರಿಸುವ ಕಾರ್ಯ
12 ವರ್ಷಗಳಿಗೊಮ್ಮೆ ನೆರವೇರುವ ಈ ಮಹಾಮಸ್ತಕಾಭಿಷೇಕದಲ್ಲಿ ಶ್ರಾವಕರು, ಶ್ರಾವಕಿಯರು ಪಾಲ್ಗೊಳ್ಳುವುದರಿಂದ ಮುಂದಿನ 12 ವರ್ಷಗಳ ಕಾಲ ಸಮಾಜಕ್ಕೆ ದಾನಧರ್ಮ ಮಾಡಲು ಪ್ರೇರಣೆಯಾಗಲಿದೆ. ನೇರ ಪ್ರಸಾರಕ್ಕೆದ ಜತೆಗೆ ಆಧುನಿಕ ಸೌಲಭ್ಯವಾದ ಲೇಸರ್‌ ಶೋ ಪ್ರದರ್ಶನದೊಂದಿಗೆ ಜೈನ ಸಮುದಾಯದ ಪರಂಪರೆ ಜಗತ್ತಿಗೆ ಪಸರಿಸುವ ಮಹಾಮಸ್ತಕಾಭಿಷೇಕ ವೇಣೂರಿನಲ್ಲಾಗಲಿದೆ ಎಂದು ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next