Advertisement

You can’t write..! ಪತ್ರಕರ್ತರ ವಿರುದ್ಧ ಹುಚ್ಚ ವೆಂಕಟ್‌ ಆರ್ಭಟ 

02:04 PM May 02, 2017 | Team Udayavani |

ಬೆಂಗಳೂರು : ಪೊರ್ಕಿ ಹುಚ್ಚ ವೆಂಕಟ್‌ ಚಿತ್ರದ ಕುರಿತು ಋಣಾತ್ಮಕ ವಾಗಿ ಬರೆದುದಕ್ಕೆ ಹುಚ್ಚ ವೆಂಕಟ್‌ ಅವರು ಪತ್ರಕರ್ತರು ವಿರುದ್ದ ಕೆಂಡಾಮಂಡಲವಾಗಿ ಕಿರುಚಾಡಿದ ಘಟನೆ ಮಂಗಳವಾರ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದಿದೆ. 

Advertisement

ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್‌ ಅವರ ಸಮ್ಮುಖದಲ್ಲೇ ವೆಂಕಟ್‌ ಕಿರುಚಾಡಿದ್ದು, ನಿಮಗೆ ಚಿತ್ರದ ಬಗ್ಗೆ ನೆಗೆಟೀವ್‌ ಆಗಿ ಬರೆಯುವ ಹಕ್ಕಿಲ್ಲ..ಚಿತ್ರ ಚೆನ್ನಾಗಿಲ್ಲ ಅಂದರೆ ಒಂದಕ್ಷರಾನೂ ಬರಿಬೇಡಿ…ಎಂದು ಕಿಡಿ ಕಾರಿದರು. 

ಇದೇ ವೇಳೆ ಪತ್ರಕರ್ತರೊಬ್ಬರಿಗೆ ನೀವು ಚಿತ್ರ ನೋಡಿದ್ದೀರಾ ಎಂದು ಪ್ರಶ್ನಿಸಿದರು. ಇಲ್ಲಾ ಎಂದಾಗ ಕೆಂಡಾ ಮಂಡಲವಾದ ವೆಂಕಟ್‌ ಚಿತ್ರ ನೋಡದೇ ಏಕೆ ಬರೆಯುತ್ತೀರಿ ಎಂದು ಕಿರುಚಾಡಿದರು. 

ಗೋವಿಂದ್‌ ಅವರು ಸಮಧಾನ ಪಡಿಸಿದ ಬಳಿಕ ಮಾತನಾಡಿದ ವೆಂಕಟ್‌ ನಾವು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ.ಇದರಲ್ಲಿ ರೈತರ ಬಗ್ಗೆ ಇದೆ. ಮಹಿಳೆಯರ ಪರವಾಗಿ ಇದೆ ,ವಿಷ್ಣು ವರ್ಧನ್‌ ಅವರ ಕುರಿತು ಇದೆ. ಚಿತ್ರ ಡಬ್ಬಾ ಎಂದು ಬರಯಬೇಡಿ ಎಂದು ಮನವಿ ಮಾಡಿದರು.

ನಾನು ಎಲ್ಲಾ ಪತ್ರಕರ್ತರ ಬಗ್ಗೆ ದೂರುತ್ತಿಲ್ಲ ,ಕೆಲವರು ಕೆಟ್ಟದ್ದಾಗಿ ಬರೆದಿದ್ದಾರೆ. ನನಗೆ 10 ರಲ್ಲಿ 3 ಪತ್ರಕರ್ತರು ಬಂದರೆ ಸಾಕ್‌..ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next