Advertisement

ಕುಂದಾಪುರ: ಪುರಸಭೆ ಅಧ್ಯಕ್ಷರಾಗಿ ವೀಣಾ ಭಾಸ್ಕರ್‌, ಉಪಾಧ್ಯಕ್ಷರಾಗಿ ಸಂದೀಪ್‌ ಅವಿರೋಧ ಆಯ್ಕೆ

03:56 PM Nov 03, 2020 | keerthan |

ಕುಂದಾಪುರ: ಇಲ್ಲಿನ ಪುರಸಭೆಯಲ್ಲಿ 9ನೇ ಅವಧಿಗೆ ಅಧ್ಯಕ್ಷರಾಗಿ ವೀಣಾ ಭಾಸ್ಕರ್‌, ಉಪಾಧ್ಯಕ್ಷರಾಗಿ ಸಂದೀಪ್‌ ಖಾರ್ವಿ ಅವರು ನ.3ರಂದು ಅಪರಾಹ್ನ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದರು.

Advertisement

ಪುರಸಭೆಯಲ್ಲಿ ಬಿಜೆಪಿ ಬಹುಮತ ಗಳಿಸಿದ್ದು, ಚುನಾವಣೆಗೆ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್‌ ಆನಂದಪ್ಪ ನಾಯ್ಕ ಅವರು ಚುನಾವಣಾ ಫ‌ಲಿತಾಂಶವನ್ನು ಘೋಷಿಸಿದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‌ ನಾಯಕ್‌ ಕುಯಿಲಾಡಿ ಮೊದಲಾದವರು ಅಭಿನಂದಿಸಿದರು.

ಎರಡು ವರ್ಷಗಳಿಂದ ಆಯ್ಕೆಯಾದ ಸದಸ್ಯರಿಗೆ ಅಧಿಕಾರ ಇಲ್ಲದೇ ಅತಂತ್ರ ಸ್ಥಿತಿ ಇತ್ತು. ಮೂರು ಬಾರಿ ಚುನಾವಣೆಗೆ ದಿನ ನಿಗದಿಯಾದರೂ ನ್ಯಾಯಾಲಯಕ್ಕೆ ಆಕ್ಷೇಪ ಸಲ್ಲಿಕೆಯಾದ ಕಾರಣ ವಿಳಂಬವಾಗಿತ್ತು. ಇದೀಗ ನಿರಾತಂಕವಾಗಿ ನಡೆದಿದೆ.

ಇದನ್ನೂ ಓದಿ:ಆ್ಯಂಬುಲೆನ್ಸ್‌ ಸೈರನ್‌ ಕೈಕೊಟ್ಟರೂ ಕರ್ತವ್ಯ ಪ್ರಜ್ಞೆ ಮೆರೆದರು! ವ್ಯಾಟ್ಸಪ್ ಗ್ರೂಪ್ ಸಹಾಯ

Advertisement

ವೀಣಾ ಅವರು ಟಿ.ಟಿ.ರೋಡ್‌ ವಾರ್ಡ್‌ನ ಸದಸ್ಯೆಯಾಗಿದ್ದು ಸಂದೀಪ್‌ ಖಾರ್ವಿ ಅವರು ಬಹದ್ದೂರ್‌ ಶಾ ವಾರ್ಡ್‌ನ ಸದಸ್ಯ. ಒಟ್ಟು 23 ಸದಸ್ಯರಲ್ಲಿ ಬಿಜೆಪಿ 14, 8 ಕಾಂಗ್ರೆಸ್‌, 1 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಬೆಳಗ್ಗೆ ಪಕ್ಷದ ನಾಯಕರು ಹಾಗೂ ಸದಸ್ಯರು ಒಟ್ಟಾಗಿ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next