Advertisement

ವಸಾಯಿರೋಡ್‌ ಬಾಲಾಜಿ ಮಂದಿರ: ಸನ್ಯಾಸ ದೀಕ್ಷೆ ಅಮೃತ ಮಹೋತ್ಸವ

04:16 PM Jun 12, 2019 | Vishnu Das |

ಮುಂಬಯಿ: ವಸಾಯಿ ರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದ ಬಾಲಾಜಿ ಸೇವಾ ಸಮಿತಿಯವರ ಬಾಲಾಜಿ ಮಂದಿರದಲ್ಲಿ ಜಿಎಸ್‌ಬಿ ಸಮಾಜದ ಗುರುವರ್ಯರಾದ ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷೆ ಅಮೃತ ಮಹೋತ್ಸವ ಕಾರ್ಯಕ್ರಮವು ಜೂ. 5ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ವೇದಮೂರ್ತಿ ಗಿರಿಧರ ಭಟ್‌ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳು ನೆರವೇರಿತು. 

ಈ ಸಂದರ್ಭದಲ್ಲಿ ಸಮಿತಿಯ ವರಿಂದ ಭಜನಾ ಕಾರ್ಯಕ್ರಮ ನೆರವೇರಿದವು. 

ಮಂಡಳಿಯವರು ಗುರು ವರ್ಯರ ಭಜನೆಗಳನ್ನು ಹಾಡಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ನಿಡ್ಡೋಡಿ ಪ್ರಕಾಶ್‌ ಪ್ರಭು, ತಬಲಾದಲ್ಲಿ ವಿನಾಯಕ ಪೈ, ಅಮೇಯ ಪೈ, ಸತೀಶ್‌ ಕಾಮತ್‌, ಅವನಿಕಾಂತ್‌ ಭೋದೆಕರ್‌, ಪಖ್ವಾಜ್‌ನಲ್ಲಿ ಪ್ರಸಾದ್‌ ಪ್ರಭು, ಶಶಿಕಾಂತ್‌ ತಾಬ್ಡೆ ಹಾಗೂ ಅಶೋಕ್‌ ಶಿಂಧೆ ಮೊದಲಾದವರು ಸಹಕರಿಸಿದರು.

ಅಲಂಕೃತ ಗುರುವರ್ಯರ ಭಾವಚಿತ್ರಕ್ಕೆ ಮತ್ತು ಆರಾಧ್ಯ ದೇವರಾದ ವೆಂಕಟರಮಣ, ಇತರ ಪರಿವಾರ ದೇವರಿಗೆ ಮಹಾಆರತಿ ಬೆಳಗಿಸಲಾಯಿತು. 

Advertisement

ಪೂಜಾ ಪ್ರಸಾದವನ್ನು  ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್‌ ಮತ್ತು ಇತರ ಪದಾಧಿಕಾರಿಗಳಿಗೆ ನೀಡಲಾಯಿತು. ಲಕ್ಷ್ಮ¾ಣ್‌ ರಾವ್‌ ಅವರು ಪಂಚಕಜ್ಜಾಯ, ಪಾನಕ ಸೇವೆಯಲ್ಲಿ ದೇವೇಂದ್ರ ಭಕ್ತ, ಹಣ್ಣು ಹಂಪಲಿನ ಸೇವೆಯಲ್ಲಿ ಪ್ರಶಾಂತ್‌ ನಾಯಕ್‌, ಹಾಲಿನ ಸೇವೆಯಲ್ಲಿ ಗಣೇಶ್‌ ಪೈ ಪರಿವಾದವರು ಸಹಕರಿಸಿದರು. 

ಅನ್ನಸಂತರ್ಪಣೆ

ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಸಮಿತಿಯವರ ವತಿಯಿಂದ ಆಯೋಜಿಸಲಾಗಿತ್ತು.

ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. 

ವಿನಾಯಕ ಎಚ್‌. ಪೈ ಮತ್ತು ದೇವದಾಸ್‌ ಭಟ್‌ ಅವರ ನೇತೃತ್ವದಲ್ಲಿ ಅಲಂಕರಿಸಲ್ಪಟ್ಟ ಗುರುವರ್ಯರ ಭಾವಚಿತ್ರವನ್ನೊಳಗೊಂಡ  ಮಂಟಪ ಮತ್ತು ದೇವರ ಮಂಟಪ ನೆರೆದ ಭಕ್ತಾದಿಗಳನ್ನು, ನೂರಾರು ಸಭಿಕರನ್ನು ರಂಜಿಸಿತು.

Advertisement

Udayavani is now on Telegram. Click here to join our channel and stay updated with the latest news.

Next