Advertisement

ಶಿವಮೊಗ್ಗ: ಹರ್ಷನ ಕುಟುಂಬಕ್ಕೆ ಸಾಂತ್ವಾನ ಹೇಳಿದ ವಿವಿಧ ಮಠಾಧೀಶರು

11:35 AM Feb 26, 2022 | Team Udayavani |

ಶಿವಮೊಗ್ಗ: ಇತ್ತೀಚೆಗೆ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ವಿವಿಧ ಮಠಾಧೀಶರು ಸಾಂತ್ವಾನ ಹೇಳಿದರು.

Advertisement

ಸಾಂತ್ವಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣ ಶ್ರೀ, ದೇಶದಲ್ಲಿ ಎಲ್ಲರೂ ಭಾವೈಕ್ಯತೆ ಹಾಗೂ ರಾಷ್ಟ್ರೀಯತೆಯನ್ನು ಹೊಂದಬೇಕು. ರಾಷ್ಟ್ರ ಉಳಿದರೇ ನಾವು ಉಳಿದಂತೆ ಎಂಬ ಭಾವ ಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಳಿಸುತ್ತಿದ್ದ ಯುವ ಉತ್ಸಾಹಿ ಹರ್ಷ ಹತ್ಯೆಯಾಗಿದ್ದಾನೆ. ಹಿಂಸಾತ್ಮಕ ಸಂಘರ್ಷದಲ್ಲಿ ಹರ್ಷ ಹತ್ಯೆಯಾಗಿದ್ದಾನೆ. ಈ ರೀತಿಯ ಹಿಂಸಾತ್ಮಕ ಸಂಘರ್ಷ ಯಾರಿಗೂ ಭೂಷಣವಲ್ಲ ಎಂದರು.

ಇದನ್ನೂ ಓದಿ:ಸೂಚನೆಯಿಲ್ಲದೆ ಗಡಿ ಭಾಗಕ್ಕೆ ತೆರಳಬೇಡಿ: ಉಕ್ರೇನ್ ನಲ್ಲಿರುವ ಭಾರತೀಯರಿಗೆ ಸೂಚನೆ

ಹರ್ಷನನ್ನು ಕಳೆದುಕೊಂಡು ರಾಜ್ಯ ಹಾಗೂ ರಾಷ್ಟ್ರವೇ ದುಃಖದಲ್ಲಿದೆ. ಹಾಗೇಯೇ ಕುಟುಂಬವು ನೋವಿನಲ್ಲಿದ್ದು, ಎಲ್ಲರೂ ಸಾಂತ್ವಾನ ಹೇಳಿದ್ದೇವೆ. ಸಂತರ ನಡೆ ಸಾಂತ್ವಾನದ ಕಡೆ ಎಂಬಂತೆ ನೊಂದವರಿಗೆ ಸಾಂತ್ವಾನ ಹೇಳಿದ್ದೇವೆ. ಶಾಂತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಆಂತರಿಕವಾಗಿ ಹಾಗೂ ಬಹಿರಂಗವಾಗಿ ಎಲ್ಲಡೆ ನೆಲೆಸಲಿ ಎಂದು ಶ್ರೀಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next