Advertisement

ಕಾಂತಾರ “ವರಾಹ ರೂಪಂ’ಹಾಡಿನ ವಿವಾದ: ಹೇಳಿಕೆ ದಾಖಲು

11:37 PM Feb 13, 2023 | Team Udayavani |

ತಿರುವನಂತಪುರಂ: “ವರಾಹ ರೂಪಂ’ ಹಾಡಿನ ವಿವಾದ ಪ್ರಕರಣ ಸಂಬಂಧ ಕಾಂತಾರ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಹೇಳಿಕೆಯನ್ನು ದಾಖಲಿಸಿಕೊಂಡಿರುವುದಾಗಿ ಕೇರಳ ಪೊಲೀಸರು ತಿಳಿಸಿದ್ದಾರೆ.

Advertisement

ಕೇರಳ ಹೈಕೋರ್ಟ್‌ ಆದೇ ಶದ ಹಿನ್ನೆಲೆ ನಟ -ನಿರ್ದೇಶಕ ರಿಷಭ್‌ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್‌ ಕಿರಗಂದೂರು ಅವರು ಸೋಮವಾರ ಕಲ್ಲಿಕೋಟೆ ಪೊಲೀಸ್‌ ಠಾಣೆಗೆ ಹಾಜ ರಾಗಿದ್ದರು. ಹಾಡಿನ ಕೃತಿಚೌರ್ಯ ಸಂಬಂಧಿಸಿದಂತೆ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ.

ಅಗತ್ಯವಿದ್ದರೆ ಅವರನ್ನು ಮತ್ತೆ ಕರೆಯಲಾಗುತ್ತದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next