Advertisement

ವಂದೇ ಭಾರತ್‌ ರೈಲು ಓಡಿಸಿ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಒತ್ತಾಯ

07:34 PM Feb 02, 2022 | Team Udayavani |

ತಿರುವನಂತಪುರ: ಕಾಸರಗೋಡಿನಿಂದ ತಿರುವನಂತಪುರ ವರೆಗಿನ ಸೆಮಿ ಹೈಸ್ಪೀಡ್‌ ರೈಲು ಯೋಜನೆ ಬದಲಿಗೆ, ಕೇಂದ್ರ ಸರ್ಕಾರ ವಂದೇ ಭಾರತ್‌ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು. ಹೀಗೆಂದು ತಿರುವನಂತಪುರದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಒತ್ತಾಯಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ವಂದೇ ಭಾರತ್‌ ರೈಲುಗಳು ಪ್ರತಿ ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ.

ಕೇರಳ ಮತ್ತು ಕೇಂದ್ರ ಸರ್ಕಾರಗಳು ಬಹುಕೋಟಿ ಸಿಲ್ವರ್‌ ಲೈನ್‌ ಯೋಜನೆಗೆ ಬದಲಿಗೆ ಅತ್ಯಂತ ಮಿತವ್ಯಯಿಯಾಗಿರುವ ವಂದೇ ಭಾರತ್‌ ರೈಲು ಸಂಚರಿಸುವಂತೆ ಮಾಡುವತ್ತ ಮನಸ್ಸು ಮಾಡಬೇಕು ಎಂದು ಟ್ವೀಟ್‌ನಲ್ಲಿ ಸಲಹೆ ಮಾಡಿದ್ದಾರೆ.

ಇದನ್ನೂ ಓದಿ:ಜೋಡೆತ್ತಿನ ಸಾವು : 4,000 ಮಂದಿಗೆ ಸಂತರ್ಪಣೆ ಹಾಕಿ ಗೌರವ ಕೊಟ್ಟ ರೈತ

ಇತ್ತೀಚೆಗೆ ಕೇರಳ ಸರ್ಕಾರದ ಸಿಲ್ವರ್‌ಲೈನ್‌ ರೈಲು ಯೋಜನೆಗೆ ಬೆಂಬಲ ವ್ಯಕ್ತಪಡಿಸಿ ಪಕ್ಷದ ವರಿಷ್ಠರಿಂದ ತರಾಟೆಗೆ ಒಳಗಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next